ಅಡ್ಡಕ್ಕೆ ಬಲಗಾಲಿಟ್ಟ ಸಂಜಯ್ ದತ್.

 

 

 

ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೋಮ್ಯಾನ್ ಪ್ರೇಮ್ ಕಲ್ಪನೆಯಲ್ಲಿ “ಕೇಡಿ” ಯಾಗಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ..ಕೆಜಿ ಗಟ್ಟಲೆ ತೂಕ ಇಳಿಸಿಕೊಂಡು ಅಖಾಡಕ್ಕೆ ಇಳಿಯಲು ಪೊಗರು ಪೋರ ರೆಡಿಯಾಗಿದ್ರೆ. ಧ್ರುವ ಎದುರು ಸಂಜು ಬಾಬನ ನಿಲ್ಲಿಸೋಕೆ ಪ್ರೇಮ್ ನೀಲ ನಕ್ಷೆ ಸಿದ್ದಪಡಿಸಿದ್ದಾರೆ..ಹಾಗಾದ್ರೆ ಪ್ರೇಮ್ ಕೇಡಿ ಶೂಟಿಂಗ್ ಶುರುಮಾಡೊದ್ಯಾವಾಗ..?  ಕೇಡಿ ಅಡ್ಡಕ್ಕೆ ಸಂಜಯ್ ದತ್ ಬಲಗಾಲಿಟ್ಟು ಅರ್ಭಟಿಸೋದ್ಯಾವಗ ಅಂತ ತಿಳ್ಕೋ ಬೇಕಾ? ಈ ಸ್ಟೋರಿ ನೋಡಿ.. ಜೋಗಿ ಪ್ರೇಮ್ ಸಿನಿಮಾಗಳಂದ್ರೆ ಸೌಂಡು ಇರುತ್ತೆ ಜೊತೆಗೆ ಒಂದೊಳ್ಳೆ ಬ್ರ್ಯಾಂಡು ಇರುತ್ತೆ.. ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ರಿಲೀಸ್ ಆಗೋವರೆಗೂ ಒಂದಲ್ಲ ಒಂದು ಸುದ್ದಿಯಲ್ಲಿ ಇರುವಂತೆ ನೋಡಿ ಕೊಳ್ಳುವ ಪ್ರೇಮ್..ಆಕ್ಷನ್ ಪ್ರಿನ್ಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ ಅಂದ್ರೆ ಕೇಳಬೇಕಾ..? ಹಬ್ಬ ಮಾಡೋ ಜಾಗದಲ್ಲಿ ಊರಬ್ಬ ಮಾಡ್ತಾರೆ ಪ್ರೇಮ್..ಈ ಸಿನಿಮಾ ಶುರುವಾದಗಿಂದ ಟಾಕ್ ಅಲ್ಲೆ ಇರುವ ಪ್ರೇಮ್ ಈಗ ದುಬಾರಿ ಸಂಭಾವನೆ ಕೊಟ್ಟು ಕೆಜಿಎಫ್ ಅಧೀರನ ಕರ್ಕೊಂಡ್ ಬಂದು ಕೇಡಿ ಅಡ್ಡ ದಲ್ಲಿ ನಿಲ್ಲಿಸಿದ್ದಾರೆ.. ಕಳೆದ ವರ್ಷ ಡಿಸೆಂಬರ್ ನಲ್ಲಿ ಯಾರಿಗೂ ತಿಳಿಯದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕರೆತಂದು ಅಣ್ಣಯ್ಯಪ್ಪ ಪಾತ್ರಕ್ಕೆ ಬಣ್ಣ ಹಾಕಿಸಿ, ಹೊಸ ವರ್ಷಕ್ಕೆ ಅಣ್ಣಯ್ಯಪ್ಪನ‌ ಪಾತ್ರ ರಿವೀಲ್ ಮಾಡುವ ಮೂಲಕ ಸಿನಿ ಪ್ರೇಮಿಗಳಿಗೆ ಸರ್ಪ್ರೇಸ್ ಕೊಟ್ಟಿದ್ರು.ಈಗಅದೇ ರೀತಿ ಸೈಲೆಂಟ್ ಆಗಿಯೇ ಎರಡನೇ ಶೆಡ್ಯೂಲ್ ಶುರು ಮಾಡಿರುವ ಡಿಕೆ ಪ್ರೇಮ್ ಸಂಜಯ್ ದತ್ ನ ಕರ್ಕೊಂಡ್ ಬಂದು ಶೂಟಿಂಗ್ ಶುರು ಮಾಡಿದ್ದಾರೆ. ಇಂದಿನಿಂದ ಕೇಡಿ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಶುರು ಆಗಿದ್ದು ಸಂಜಯ್ ದತ್ ಫಸ್ಟ್ ಟೈಮ್ ಕೇಡಿ ಅಡ್ಡದಲ್ಲಿ ಕಾಣಿಸಿದ್ದಾರೆ..ವಿಶೇಷ ಅಂದ್ರೆಕೇಡಿ ಚಿತ್ರದ ಶೂಟಿಂಗ್ ನಲ್ಲಿ ಸಂಬುಬಾಬಗೆ ಪ್ರೇಮ್ ಆಕ್ಷನ್ ಕಟ್ ಹೇಳಿಲ್ಲ ಬದಲಿಗೆ ಸ್ಟಾರ್ ಸ್ಟಂಟ್ ಮಾಸ್ಟರ್ ರವಿವರ್ಮ ಆಕ್ಷನ್ ಕಟ್ ಹೇಳಿದ್ದಾರೆ.. ಪ್ರೇಮ್ ಬಳಗ ಅದ್ದೂರಿಯಾಗಿ ಕೇಡಿ ಅಖಾಡಕ್ಕೆ ಸಂಜಯ್ ದತ್ ಅವರನ್ನ ವೆಲ್ ಕಮ್ ಮಾಡಿದ್ದಾರೆ.. ಸಂಜಯ್ ದತ್ ಇಂಟರ್ಡಕ್ಷನ್ ಫೈಟ್ ಶೂಟ್ ಮಾಡೊದ್ರಲ್ಲಿ ಪ್ರೇಮ್ ಬಳಗ ಬ್ಯುಸಿಯಾಗಿದೆ. ಅಧೀರನ ಎಂಟ್ರೀ ಸೀನ್ ಗೆ ಬರೋಬರಿ ಎರಡು ಕೋಟಿ ಖರ್ಚ್ ಮಾಡಿಸಿರಿವ ಪ್ರೇಮ್‌.ಸಾಹಸ ನಿರ್ದೇಶಕ ರವಿವರ್ಮ ಅವರ ಕಲ್ಪನೆಯಲ್ಲಿ ಸಂಜು ಬಾಬ ಎಂಟ್ರೀ ಸೀನ್ ಶೂಟ್ ಮಾಡಿಸ್ತಿದ್ದಾರೆ‌.. ಬರೋಬರಿ 8 ದಿನಗಳು ಸಂಜಯ್ ದತ್‌ಎಂಟ್ರಿ ಸೀನ್ ಶೂಟ ಮಾಡಲು ಶೆಡ್ಯೂಲ್ ಹಾಕಿರುವ ರವಿವರ್ಮ ಕ್ವಾಲಿಟಿಯಲ್ಲಿ ಕಾಂಪ್ರೂ ಆಗದೆ ಭರ್ಜರಿಯಾಗಿ ಮುನ್ನಭಾಯ್ ನ ತೋರಿಸೋಕೆ ಶಾಟ್ ಕಂಪೋಸ್ ಮಾಡೊಕೆ ಪ್ಲಾನ್ ಮಾಡಿ ಕೊಂಡಿದ್ದಾರೆ.

ಜಾಲಹಳ್ಳಿ ಬಳಿ ಇರುವ ಎಚ್ ಎಮ್ ಟಿ ಫ್ ಫ್ಯಾಕ್ಟರಿಯಲ್ಲಿ ಅದ್ದೂರಿಯಾಗಿ ಸೆಟ್ ಹಾಕಿಸಿರುವ ಕೇಡಿ ಬಳಗ ಸಂಜಯ್ ದತ್ ಎಂಟ್ರಿಸೀನ್ ಗಾಗಿಯೇ ಕೋಟಿ ಕೋಟಿ ಖರ್ಚ್ ಮಾಡ್ತಿದ್ದಾರೆ.ಇನ್ನು ಈ ಶೇಡ್ಯೂಲ್ ಕಂಪ್ಲೀಟ್ ಆದ ಮೇಲೆ ಫೆಬ್ರವರಿ ಎರಡನೇ ವಾರದಲ್ಲಿ ಮೂರನೇ ಶೆಡ್ಯೂಲ್ ಪ್ಲಾನ್ ಮಾಡಿದ್ದು,.. ಮೂರನೇ ಹಂತದ ಚಿತ್ರೀಕರಣದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೇಡಿ ಅಡ್ಡದಲ್ಲಿ ಕಾಣಿಸಲಿದ್ದಾರೆ.. ಈಗಾಗಲೇ ಪಾತ್ರಕ್ಕಾಗಿ 20 ಕೆಜಿ ಇಳಿಸಿರುವ ಧ್ರುವ.. ಎಪ್ಪತ್ತರ ದಶಕದ ಲುಕ್ ಅಂಡ್ ಗೆಟಪ್ ನಲ್ಲಿ ರೆಡಿಯಾಗಿ ಪ್ರೇಮ್ ಬಳಗದಲ್ಲಿ ಕಾಣಿಸಲಿದ್ದಾರೆ..ಇನ್ನು ಈ ಚಿತ್ರಕ್ಕೆ ಕನ್ನಡದ ನಟಿಯನ್ನೆ ನಾಯಕಿಯಾಗಿ ಕರೆತರಲು ಪ್ಲಾನ್ ಮಾಡಿರುವ ಪ್ರೇಮ್ ನಟಿ ಶ್ರೀ ಲೀಲಾ, ಇಲ್ಲ ಗ್ರೀಷ್ಮಾ ನಾಣಯ್ಯ ಇಬ್ಬರಲ್ಲಿ ಒಬ್ಬರನ್ನುಫೈನಲ್ ಮಾಡ್ಕೊಂಡು ಧ್ರುವ ಜೊತೆ ಡ್ಯುಯೆಟ್ ಆಡಿಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ ಕುರಿತ ವಿವಾದಿತ ಬಿಬಿಸಿ ಸಾಕ್ಷ್ಯ ಚಿತ್ರ ಸಾರ್ವಜನಿಕ ಪ್ರದರ್ಶನ.

Fri Jan 27 , 2023
ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದ ಕಾಂಗ್ರೆಸ್ ಘಟಕ ಇಂದು ತಿರುವನಂತಪುರದಲ್ಲಿ ಪ್ರದರ್ಶಿಸಿತು ಕೇಂದ್ರ ಸರ್ಕಾರ ಭಾರತದಲ್ಲಿ ಸಾಕ್ಷ್ಯ ಚಿತ್ರವನ್ನು ಸುಳ್ಳು ಮತ್ತು ಪ್ರೇರಿತ “ಪ್ರಚಾರ” ಎಂದು ಹೇಳಿ ನಿಷೇಧಿಸಿದ್ದರೂ ಸಹ ಕೇರಳ ಕಾಂಗ್ರೆಸ್ ಘಟಕ ಸಾಕ್ಷ್ಯ ಚಿತ್ರ ಪ್ರದರ್ಶಿಸಿದರುಎರಡು ಭಾಗಗಳ ಸರಣಿಯ ಸಾರ್ವಜನಿಕ ಪ್ರದರ್ಶನ – 2002 ರ ಗುಜರಾತ್ ಗಲಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯದ ಬಗ್ಗೆ ಮಾತನಾಡುವುದು, ಇತರ […]

Advertisement

Wordpress Social Share Plugin powered by Ultimatelysocial