ಕಾರವಾರ – ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಇಂದು ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಬಾಳಿಗಾ ಕಾಲೇಜಿನ ಮೈಧಾನದಲ್ಲಿ ಅಗ್ನಿವೀರರಾಗಿ ಸೈನ್ಯಕ್ಕೆ ಸೇರುವ ಕನಸನ್ನು ಹೊತ್ತ ಅಭ್ಯರ್ಥಿಗಳೊಂದಿಗೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಿಹಿಯನ್ನು ಹಂಚುವುದರ ಮೂಲಕ ಆಚರಿಸಲಾಯಿತು. ಕುಮಟಾದ ನಿವೃತ್ತ ಸೈನಿಕರಾದ ನವೀನ ನಾಯ್ಕ ಹಾಗೂ ನಿವೃತ್ತ ಸೈನಿಕರ ತಂಡದಿಂದ ಯೋಧರಾಗಲು ಹಂಬಲವಿರುವ ಅಭ್ಯರ್ಥಿಗಳಿಗೆ ದೈಹಿಕ ಕಸರತ್ತನ್ನು ಮಾಡಿಸಲಾಗುತ್ತಿದೆ. ಸುಮಾರು 80 ಕ್ಕೂ ಹೆಚ್ಚು ಅಭ್ಯರ್ಥಿಗಳು ಇಲ್ಲಿ ಭಾಗವಹಿಸಿ ತರಬೇತಿ ಪಡೆಯುತ್ತಿದ್ದಾರೆ. ಇವರೆಲ್ಲರ ಕನಸುಗಳು ನನಸಾಗಲೆಂದು ಅದರಲ್ಲೂ ಕುಮಟಾದಿಂದ ಹೆಚ್ಚು ಅಭ್ಯರ್ಥಿಗಳು ಸೈನ್ಯಕ್ಕೆ ಸೇರಲೆಂದು ಯುವಾ ಬ್ರಿಗೇಡ್ ನವರು ಶುಭ ಹಾರೈಸಿದ್ರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: