ಅನೈತಿಕ ಸಂಬಂಧ: ಫ್ಲ್ಯಾಟ್ ನೊಳಗೆ ಅರೆನಗ್ನ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ, ಆರೋಪಿ ಪರಾರಿ…

ನವದೆಹಲಿ: ಯುವತಿಯ ಕತ್ತು ಹಿಸುಕಿ ಕೊಲೆ ಮಾಡಲಾದ ಅರೆ ಬೆತ್ತಲೆ ಶವ ದೆಹಲಿಯ ಬುರಾರಿ ಪ್ರದೇಶದಲ್ಲಿ ಶುಕ್ರವಾರ (ಫೆ.19) ಪತ್ತೆಯಾಗಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬುರಾರಿಯ ಕೌಶಿಕ್ ಎನ್ ಕ್ಲೇವ್ ಪ್ರದೇಶದಲ್ಲಿ ನಡೆದ ಈ ಘಟನೆಯ ಆರೋಪಿಯನ್ನು ಅಮಾನ್ ಎಂದು ಗುರುತಿಸಲಾಗಿದ್ದು, ಈತ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ವಿವರ ನೀಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತನ್ನ ಸಂಬಂಧಿಯನ್ನು ಭೇಟಿಯಾಗುವುದಾಗಿ ಆರೋಪಿಯ ಪತ್ನಿ ಮನೆಯಿಂದ ಹೊರ ಹೋದ ಮೇಲೆ, ಅಮಾನ್ ಈ ಯುವತಿಯನ್ನು ಮನೆಗೆ ಆಹ್ವಾನಿಸಿದ್ದ. ಪತ್ನಿ ಮನೆಗೆ ಬಂದಾಗ, ಯುವತಿಯ ಶವ ಬೆಡ್ ಮೇಲೆ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು, ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದು, ಪ್ರಾಥಮಿಕ ತನಿಖೆ ಪ್ರಕಾರ, ಕೌಶಿಕ್ ಎನ್ ಕ್ಲೇವ್ ನ ಫ್ಲ್ಯಾಟ್ ನಲ್ಲಿ ಅಮಾನ್ ಮತ್ತು ಪತ್ನಿ ಪ್ರಿಯಾಂಕಾ ರಾವತ್ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಅಮಾನ್ ಪತ್ನಿ ರಾತ್ರಿ 8ಗಂಟೆಗೆ ಫ್ಲ್ಯಾಟ್ ಗೆ ಬಂದಾಗ ಅರೆನಗ್ನ ಸ್ಥಿತಿಯಲ್ಲಿದ್ದ ಯುವತಿಯ ಶವ ಪತ್ತೆಯಾಗಿತ್ತು. ಕೂಡಲೇ ಪ್ರಿಯಾಂಕಾ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಯುವತಿಯ ಜೊತೆ ಅಮಾನ್ ದೀರ್ಘಕಾಲದಿಂದ ಸಂಬಂಧ ಹೊಂದಿದ್ದು, ಯಾವ ಕಾರಣದಿಂದ ಯುವತಿಯನ್ನು ಕೊಲೆ ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಏತನ್ಮಧ್ಯೆ ಅಮಾನ್ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಯೋಮಿತಿ ವಂಚನೆ ಪ್ರಕರಣದಲ್ಲಿ ರಾಜವರ್ಧನ್ ಹಂಗರ್ಗೇಕರ್ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ.

Sat Feb 19 , 2022
  ಭಾರತದ U-19 ಕ್ರಿಕೆಟಿಗ ರಾಜವರ್ಧನ್ ಹಂಗರಗೇಕರ್ ಮಹಾರಾಷ್ಟ್ರದ ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತ ಓಂಪ್ರಕಾಶ್ ಬಕೋರಿಯಾ ಅವರು ವಯೋಮಿತಿ ವಂಚನೆ ಪ್ರಕರಣದ ವಿರುದ್ಧ ಆರೋಪ ಮಾಡಿದ್ದರು. ಮರಾಠಿ ಪತ್ರಿಕೆ ಸಾಮ್ನಾದಲ್ಲಿ ವರದಿಯ ಪ್ರಕಾರ ಅವರು ಯುವ ವೇಗಿ ವಿರುದ್ಧ ಸಾಕ್ಷ್ಯಗಳೊಂದಿಗೆ ಔಪಚಾರಿಕ ಪತ್ರ ಬರೆದಿದ್ದಾರೆ. ಭಾರತದ ಐದನೇಯಲ್ಲಿ ಹಂಗರ್ಗೇಕರ್ ಪ್ರಮುಖ ಪಾತ್ರ ವಹಿಸಿದರು U-19 ವಿಶ್ವಕಪ್ ಈ ವರ್ಷದ ಆರಂಭದಲ್ಲಿ ಕೆರಿಬಿಯನ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಆದಾಗ್ಯೂ, ಇತ್ತೀಚಿನ […]

Advertisement

Wordpress Social Share Plugin powered by Ultimatelysocial