ಬಾಲಿವುಡ್‌ಗೆ ಹೋದ್ಮೇಲೆ ಚೈತನ್ಯನನ್ನೇ ಮರೆತ ಸಮಂತಾ..!

ನಟ ನಾಗ ಚೈತನ್ಯ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ʼಎಮ್‌ ಮಾಯೇ ಚೇಸಾವೇʼ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳಾಗಿವೆ. ಈ ಚಿತ್ರವನ್ನು ಗೌತಮ್ ವಾಸುದೇವ ಮೆನನ್ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಜೆಸ್ಸಿಯಾಗಿ ಸಮಂತಾ ಮತ್ತು ಕಾರ್ತಿಕ್ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ.ನಾಗ ಚೈತನ್ಯ ಈ ಸಿನಿಮಾದಲ್ಲಿ ತನಗಿಂತ ಎರಡು ವರ್ಷ ದೊಡ್ಡ ಹುಡುಗಿಯನ್ನು ಪ್ರೀತಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಯಾವ ಕ್ಷಣದಲ್ಲಿ ಜೊತೆಯಾಗಿ ಈ ಸಿನಿಮಾ ಮಾಡಿದ್ರೋ ಗೊತ್ತಿಲ್ಲ ಆ ನಂತರ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಹಿರಿಯರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ರು.ಇಬ್ಬರು ಸ್ಟಾರ್‌ಗಳ ಮದುವೆ ಅಕ್ಟೋಬರ್ 2017 ರಲ್ಲಿ ಅದ್ಧೂರಿಯಾಗಿ ನಡೆಯಿತು. ಅಕ್ಟೋಬರ್ 2021 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದಾಗಿ ಅಧಿಕೃತವಾಗಿ ಘೋಷಿಸಿದ್ದರು. ಇಬ್ಬರು ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅದನ್ನು ಯಾರೂ ನಂಬಿರಲಿಲ್ಲ. ಆದರೆ ಅಂತಿಮವಾಗಿ ಇಬ್ಬರು ಬೇರ್ಪಟ್ಟಿದ್ದರು. ಈ ವಿಚಾರ ತಿಳಿದು ಚೈ ಹಾಗೂ ಸ್ಯಾಮ್‌ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.ಇದೀಗ ಸಮಂತಾ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಾಜಿ ಪತಿಯನ್ನು ಸಂಪೂರ್ಣವಾಗಿ ಮರೆತಿದಾರೆ ಎನ್ನುವ ಮ್ಯಾಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಎಮ್‌ ಮಾಯೇ ಚೇಸಾವೇ ಸಿನಿಮಾ ರಿಲೀಸ್ ಆಗಿ 13 ವರ್ಷಗಳಾದ ಹಿನ್ನೆಲೆಯಲ್ಲಿ ಇಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಇಂಟರ್‌ನೆಟ್‌ನಲ್ಲಿ ಹಾಟ್ ಟಾಪಿಕ್ ಆಗುತ್ತಿವೆ.ನಾಗ ಚೈತನ್ಯ ಅವರು ಸಮಂತಾ ಅವರೊಂದಿಗಿನ ಪೋಸ್ಟರ್ ಹಂಚಿಕೊಂಡು, ಎಮ್‌ ಮಾಯೇ ಚೇಸಾವೇ’ ಚಿತ್ರ ಬಿಡುಗಡೆಯಾಗಿ 13 ವರ್ಷಗಳಾಗಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಸಮಂತಾ ನಾಗ ಚೈತನ್ಯ ಜೊತೆ ಇರುವ ಫೋಟೋವನ್ನು ಎಲ್ಲಿಯೂ ಹಂಚಿಕೊಂಡಿಲ್ಲ. ಜೆಸ್ಸಿ ಪಾತ್ರಕ್ಕೆ ಸಂಬಂಧಿಸಿದ ಫೋಟೋಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಇದರಿಂದ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಹಿಂದಿ ಟಿವಿ ಶೋನಲ್ಲಿ ಕನ್ನಡಿಗರ ಕೊಂಡಾಡಿದ ನಟ ಗಣೇಶ್,

Sun Feb 26 , 2023
  ನಟ ಗೋಲ್ಡನ್ ಸ್ಟಾರ್ ಗಣೇಶ್ ಹಿಂದಿಯ ಕಪಿಲ್ ಶರ್ಮಾ ಶೋನಲ್ಲಿ ತಮ್ಮ ಅಭಿಮಾನಿಗಳು ಹಾಗೂ ಕನ್ನಡಿಗರ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.ಪ್ಯಾನ್ ಇಂಡಿಯಾ ಸಿನಿಮಾದಿಂದಾಗಿ ಪ್ರಾದೇಶಿಕ ಸಿನಿಮಾ ರಂಗಗಳ ನಡುವೆ ಇದ್ದ ಅಂತರ ಕಡಿಮೆಯಾಗಿದ್ದು, ಬೇರೆ ಬೇರೆ ಭಾಷೆಯ ನಟರು ಬೇರೆ ಬೇರೆ ಭಾಷೆಯ ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.ಕನ್ನಡದ ನಟರಾದ ಯಶ್, ರಿಷಬ್ ಶೆಟ್ಟಿ, ಸುದೀಪ್ ಅವರುಗಳು ಈಗಾಗಲೇ ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಪ್ಯಾನ್ ಇಂಡಿಯಾ ಸುತ್ತು […]

Advertisement

Wordpress Social Share Plugin powered by Ultimatelysocial