ಸುಂದರಿಯ ವಿಡಿಯೋ ಕಾಲ್‌ ರಿಸೀವ್‌ ಮಾಡಿ 2.69 ಕೋಟಿ ರೂ. ಕಳ್ಕೊಂಡ ಉದ್ಯಮಿ!

ಹಮದಾಬಾದ್: ಗುಜರಾತಿನ ಉದ್ಯಮಿಯೊಬ್ಬರು ಸುಂದರಿಯ ಬಲೆಗೆ ಬಿದ್ದಿದ್ದು, 2.69 ಕೋಟಿ ರೂ. ಕಳ್ಕೊಂಡ ಘಟನೆ ಬೆಳಕಿಗೆ ಬಂದಿದೆ.

ನವೀಕರಿಸಬಹುದಾದ ಇಂಧನ ಸಂಸ್ಥೆಯನ್ನು ನಡೆಸುತ್ತಿರುವ ಈ ಉದ್ಯಮಿಗೆ ಕಳೆದ ವರ್ಷ ಆಗಸ್ಟ್ 8 ರಂದು ಮೋರ್ಬಿಯಿಂದ ರಿಯಾ ಶರ್ಮಾ ಎಂದು ಗುರುತಿಸಿಕೊಂಡ ಮಹಿಳೆಯಿಂದ ಕರೆ ಬಂದಿತ್ತು. ಇದಾದ ನಂತ್ರ, ವಿಡಿಯೋ ಕಾಲ್ ಮಾಡುವಾಗ ಆತನ ಬಟ್ಟೆ ಬಿಚ್ಚುವಂತೆ ಆಕೆ ಮನವೊಲಿಸಿದ್ದಾಳೆ. ನಂತರ ಆಕೆ ಏಕಾಏಕಿ ಕರೆಯನ್ನು ಕಟ್ ಮಾಡಿ, ಉದ್ಯಮಿಗೆ 50,000 ಪಾವತಿಸುವಂತೆ ಕೇಳಿದ್ದಾಳೆ. ಹಣ ಕೊಡದಿದ್ರೆ, ನಗ್ನ ವೀಡಿಯೊ ಕ್ಲಿಪ್ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.

ಕೆಲವು ದಿನಗಳ ನಂತರ, ಉದ್ಯಮಿಗೆ ಒಬ್ಬ ವ್ಯಕ್ತಿಯಿಂದ ಕರೆ ಬಂದಿದ್ದು, ಅವನು ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಗುಡ್ಡು ಶರ್ಮಾ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ, ವಿಡಿಯೋ ಕ್ಲಿಪ್ ತನ್ನ ಬಳಿ ಇದೆ ಎಂದು ಹೇಳಿ 3 ಲಕ್ಷ ರೂ. ಸುಲಿಗೆ ಮಾಡಿದ್ದರು.

ಆಗಸ್ಟ್ 14 ರಂದು, ದೆಹಲಿ ಪೊಲೀಸ್ ಸೈಬರ್ ಸೆಲ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ಇನ್ನೊಬ್ಬ ವ್ಯಕ್ತಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು 80.97 ಲಕ್ಷ ರೂ. ಕೇಳಿದ್ದಾನೆ. ಆಗಲೂ ಕೂಡ ಉದ್ಯಮಿ ಹಣ ಪಾವತಿಸಿದ್ದಾನೆ. ಮತ್ತೆ ಕೆಲವು ದಿನಗಳ ನಂತ್ರ, ಉದ್ಯಮಿಗೆ ನಕಲಿ ಸಿಬಿಐ ಅಧಿಕಾರಿಯಿಂದ ಕರೆಗಳು ಬಂದಿದ್ದು, ಮಹಿಳೆಯ ತಾಯಿ ಕೇಂದ್ರ ತನಿಖಾ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಈ ಪ್ರಕರಣವನ್ನು ಇತ್ಯರ್ಥಗೊಳಿಸಲು 8.5 ಲಕ್ಷಕ್ಕೆ ಬೇಡಿಕೆಯಿಟ್ಟರು. ಇದರಿಂದ ಹೆದರಿಂದ ಉದ್ಯಮಿ ಡಿಸೆಂಬರ್ 15 ರವರೆಗೆ ನಕಲಿ ದೆಹಲಿ ಹೈಕೋರ್ಟ್‌ಗೆ ಹಣವನ್ನು ಪಾವತಿಸುವುದನ್ನು ಮುಂದುವರೆಸಿದರು. ನಂತ್ರ, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂಬ ಆದೇಶವು ಅವರನ್ನು ಅನುಮಾನಾಸ್ಪದವಾಗಿ ಮಾಡಿದೆ.

ಇದರಿಂದ ಬೇಸತ್ತ ಉದ್ಯಮಿ ಜನವರಿ 10 ರಂದು ಸೈಬರ್ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಗೆ ಬಂದು 11 ಜನರ ವಿರುದ್ಧ 2.69 ಕೋಟಿ ರೂ. ಸುಲಿಗೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.‌

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಆದಿ ಯೋಗಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೈಕೋರ್ಟ್ ಅವಕಾಶ ನೀಡಿದೆ.

Fri Jan 13 , 2023
ಬೆಂಗಳೂರು : ಚಿಕ್ಕಬಳ್ಳಾಪುರ ನಗರದ ಸಮೀಪವಿರುವ ಆವಲಗುರ್ಕಿಯಲ್ಲಿ ಆದಿ ಯೋಗಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಆದಿಯೋಗಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಉಪರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ರಸ್, ಕಿಣಗಿ ಅವರಿದ್ದ ಪೀಠಕ್ಕೆ ಈಶಾ ಪ್ರತಿಷ್ಠಾನ ಮನವಿ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ […]

Advertisement

Wordpress Social Share Plugin powered by Ultimatelysocial