ರಾಮನಾಗಿ ಕಿರುತೆರೆಗೆ ಮರಳಲಿದ್ದಾರೆ ಇನ್ಸ್ಪೆಕ್ಟರ್ ರಾಜೀವ

ಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಮಂಗಳ ಗೌರಿ ಮದುವೆ’ಯಲ್ಲಿ ನಾಯಕ ಇನ್ಸ್ಪೆಕ್ಟರ್ ರಾಜೀವ ನಿಮಗೆ ನೆನಪಿರಬಹುದು. ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಗಗನ್ ಚಿನ್ನಪ್ಪ ಮೊದಲ ಪ್ರಯತ್ನದಲ್ಲೇ ನಾಯಕನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಹ್ಯಾಂಡ್ ಸಮ್ ಹುಡುಗ ಈತ.ರಾಜೀವನಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಗಗನ್ ಚಿನ್ನಪ್ಪ ತದ ನಂತರ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದರು. ‘ಮಂಗಳ ಗೌರಿ ಮದುವೆ’ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಗಗನ್ ಚಿನ್ನಪ್ಪ ಈಗ ರಾಮನಾಗಿ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಸೀತಾರಾಮ’ದಲ್ಲಿ ನಾಯಕ ರಾಮನಾಗಿ ನಟಿಸುವ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ ಗಗನ್ ಚಿನ್ನಪ್ಪ.’ಸೀತಾರಾಮ’ ಧಾರಾವಾಹಿಗಿ ವೀಕ್ಷಕರು ಕಾಯುತ್ತಿದ್ದಾರೆ. ಸದ್ಯ ಪ್ರೋಮೊಗಳು ರಿಲೀಸ್ ಆಗಿ ಭಾರೀ ಸದ್ದು ಮಾಡ್ತಿದೆ. ಬೇಗ ಧಾರವಾಹಿ ಪ್ರಸಾರ ಮಾಡಿ, ಪ್ರೈ ಟೈಂನಲ್ಲಿ ಪ್ರಸಾರ ಮಾಡಿ ಎನ್ನುತ್ತಿದ್ದಾರೆ.ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಕೃಷ್ಣ ಮುಕುಂದ ಮುರಾರಿ’ಯಲ್ಲಿ ನಟಿಸಿ ಗಗನ್ ಗಮನ ಸೆಳೆದಿದ್ದಾರೆ. ಪರಭಾಷೆಯ ಕಿರುತೆರೆಗೂ ಕಾಲಿಟ್ಟಿರುವ ಗಗನ್ ಚಿನ್ನಪ್ಪ ಮನೋಜ್ಞ ನಟನೆಯ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ ತೆಲುಗಿನ ಧಾರಾವಾಹಿಯಲ್ಲಿಯೂ ಗಗನ್ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಅಭಿನಯಿಸುತ್ತಿರುವುದು ವಿಶೇಷ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಮಖಂಡಿ ನಗರದಲ್ಲಿ ಪುಟ್ಬಾಲ್ ಪಂದ್ಯಾವಳಿಯ ಸುದ್ದಿ ಗೋಷ್ಠಿ.

Fri Jan 6 , 2023
ಜಮಖಂಡಿ ನಗರದಲ್ಲಿ ಪುಟ್ಬಾಲ್ ಪಂದ್ಯಾವಳಿಯ ಸುದ್ದಿ ಗೋಷ್ಠಿ ಜಮಖಂಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ 22 ನೇ ರಾಷ್ಟಮಟ್ಟ ಹಾಗೂ ಅಂತಾರಾಷ್ಟ ಮಟ್ಟದ ಪುಟ್ಬಾಲ್ ಪಂದ್ಯಾವಳಿಗಳು ದಿನಾಂಕ.02..02.2023 ರಿಂದ 05.02.2023 ನಡೆಯುವ ಪುಟ್ಬಾಲ್ ಪಂದ್ಯಾವಳಿಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial