ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಪ್ರಕರಣ!

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿರುವ ಮಧ್ಯೆ, ಪುಣೆಯ ಕುಸ್ತಿಪಟು ತಾಲೀಮಿನ ಸಮಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಾರುಂಜಿಯ ಮಾಮಸಾಹೇಬ್ ಮೊಹಲ್ ಕುಸ್ತಿ ಸಂಕುಲದಲ್ಲಿ ಬುಧವಾರ ಮುಂಜಾನೆ ತಾಲೀಮು ನಡೆಸಿ ಮೃತಪಟ್ಟಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಕುಸ್ತಿಪಟುವಿನ ಹೆಸರು ಸ್ವಪ್ನಿಲ್ ಪಡಲೆ. ತಾಲೀಮಿನ ವೇಳೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಅವರು ಪುಣೆಯ ಕುಸ್ತಿ ವಲಯದಲ್ಲಿ ಹೆಸರಾಂತ ಕುಸ್ತಿಪಟುವಾಗಿದ್ದು ಇತ್ತೀಚೆಗೆ ‘ಮಹಾರಾಷ್ಟ್ರ ಚಾಂಪಿಯನ್’ ಪ್ರಶಸ್ತಿಯನ್ನು ಪಡೆದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈನುಗಾರರಿಗೆ ಪರಿಹಾರಧನದ ಚೆಕ್ ವಿತರಣೆ ಮಾಡದೆ ಮಹಾಮೋಸ..!

Thu Mar 9 , 2023
ಹೈನುಗಾರರಿಗೆ ಪರಿಹಾರಧನದ ಚೆಕ್ ವಿತರಣೆ ಮಾಡದೆ ಮಹಾಮೋಸ..! ಚರ್ಮಗಂಟು ರೋಗ ಭಾದೆಯಿಂದ ಸಾವನ್ನಪ್ಪಿದ್ದ ರಾಸುಗಳಿಗೆ ಸರ್ಕಾರದಿಂದ‌ ಪರಿಹಾರ ಧನ ಬಿಡುಗಡೆ. ಸರ್ಕಾರದಿಂದ‌ ಹಣ ಬಿಡುಗಡೆಯಾದರೂ ಹೈನುಗಾರರಿಗೆ ಪರಿಹಾರಧನ ನೀಡದೆ ವಿಳಂಬ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಶುಪಾಲನಾ ಇಲಾಖೆ ಅಧಿಕಾರಿಗಳಿಂದ ವಿಳಂಬ ಮೂರು ತಿಂಗಳಿಂದ ಚೆಕ್ ಬ್ಯಾಂಕ್ ಗೆ ಸಂದಾಯ ಮಾಡದೆ ಅಧಿಕಾರಿಗಳ ಕಳ್ಳಾಟ. ಪರಿಹಾರದ ಧನದ ಚೆಕ್ ಗಳನ್ನು ಕಚೇರಿಯಲ್ಲೇ ಇಟ್ಟುಕೊಂಡು ಅಧಿಕಾರಿಗಳ ಕಳ್ಳಾಟ..! ೩ ತಿಂಗಳಿಂದ ಪಶುಪಾಲನಾ ಕಚೇರಿ […]

Advertisement

Wordpress Social Share Plugin powered by Ultimatelysocial