ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ:ಬಾವ್ಯಕಥೆ ಮೆರದ ರಾಮದುರ್ಗ ಮುಸ್ಲಿಂ ಬಾಂಧವರು
ರಾಮದುರ್ಗ ಅಯ್ಯಪ್ಪಸ್ವಾಮಿ ಮಾಲಧಾರಿಗಳಿಗೆ ಮುಸ್ಲಿಂ ಬಾಂಧವರಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಿ ಬಾವ್ಯಕಥೆ ಮೆರದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದ ಹಲಗತ್ತಿ ಬಾಯಪಾಸ್ ರಸ್ತೆ ಬದಿಯಲ್ಲಿದ್ದ ತೋಟದಲ್ಲಿ ಆಯೋಜಿಸಲಾಗಿತ್ತು.
ರಾಮದುರ್ಗ ಜಮೇತೆ ಉಲ್ಮಾ ಸಂಘಟನೆ ಮುಸ್ಲಿಂ ಸಮುದಾಯದವರು ಅನ್ನಪ್ರಸಾದ ವ್ಯವಸ್ಥೆ.
ಈ ಸಂಧರ್ಭದಲ್ಲಿ ಮಾತನಾಡಿದ ಮೌಲಾನಾ (ಬೈಟ್ )
ಇಡಿ ಜಗತ್ತು ಸೃಷ್ಟಿಕರ್ತ ಒಬ್ಬನೇ ನಮ್ಮ ನಿಮ್ಮೆಲರ ಜಗದ ಒಡೆಯಾ ಒಂದೆ ಆದರೆ ನಾಮ ಹಲವು ನಮ್ಮಲ್ಲಿ ಉಡುಪು,ಆಹಾರ ಸೇವನೆ ಬೇರೆ ಇರಬಹುದು ಆದ್ರೆ ಈ ಜಗತ್ತಿನಲ್ಲಿ ಎರಡು ಜಾತಿಗಳು ಇದ್ದಾವೆ ಅದು ಒಂದು ಹೆಣ್ಣು ಒಂದು ಗಂಡು ಹುಟ್ಟಿಸಿದ್ದಾನೆ ಇದರಲ್ಲಿ ಪಂಗಡಗಳ್ ಬೇರೆ ಬೇರೆ ಇದ್ದಾವೆ ಸೃಷ್ಟಿಕರ್ತನಲ್ಲಿ ಆತ್ಮಿಯವಾಗಿ ಯಾರು ಇರುತ್ತಾನೆ ಅಂದರೆ ಅವನ ತೋರಿದ ಮಾರ್ಗದಲ್ಲಿ ಸೃಷ್ಟಿಕರ್ತನ ಆರಾಧನೆ ಮಾಡುವನೇ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಶುಭ ನುಡಿಗಳು ನುಡಿದರು.
ಇದೆ ಸಂಧರ್ಭದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ (ಬೈಟ್ )ರಾಘವೇಂದ್ರಸ್ವಾಮಿ ದೊಡಮನಿ ಮಾತನಾಡಿ
ಮೊದಲಿಗೆ ನಮ್ಮ ಅಯ್ಯಪ್ಪಸ್ವಾಮಿ ಕಮಿಟಿಯಿಂದ ಎಲ್ಲಾ ಮುಸ್ಲಿಂ ಭಾಂದವರಿಗೆ ಧನ್ಯವಾದ ತಿಳಿಸಿ ನಿಮ್ಮ ಇಸ್ಲಾಂ ಧರ್ಮದಲ್ಲಿ ನೀವು ಒಂದು ದಿನದಲ್ಲಿ 5ಹೊತ್ತು ನಮಾಜ್ ಮಾಡುತ್ತಿರುವದು ನಾವು ಚಿಕ್ಕಂದಿನಿಂದ ನೋಡಿಕೊಂಡು ಬಂದಿರುವದು ಮತ್ತು ಈ ಥರಾ ನಮ್ಮ ರಾಮದುರ್ಗದಲ್ಲಿ ನಮ್ಮ ನಿಮ್ಮ ಬಾಂಧವ್ಯ ಬಹಳ ದಿನದಿಂದ ಪ್ರೀತಿಯಿಂದ ಇದ್ದೀವಿ ಮತ್ತು ಇಂದು ಮಾಡಿದಂತೆ ಕಾರ್ಯಕ್ರಮ ಪ್ರತಿ ವರ್ಷವು ಇದೆ ರೀತಿ ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದು ಆ ಭಗವಂತ ಹತ್ತಿರ ಕೇಳುಕೊಳ್ಳೋವೆ ಎಂದು ಹೇಳಿದರೆ.
ಈ ಸಂಧರ್ಭದಲ್ಲಿ ಗುರುಸ್ವಾಮಿಗಳಾದಂತಹ ರವಿ ಸ್ವಾಮಿ, ರಾಘವೇಂದ್ರ ಸ್ವಾಮಿ, ಅರುಣ ಸ್ವಾಮಿ ಸೇರಿದಂತೆ ನೂರಾರು ಮಾಲಾಧಾರಿಗಳು ಜಮಿಯಾತ ಏ ಉಲ್ಮಾ ರಾಮದುರ್ಗ ಅಧ್ಯಕ್ಷರು ಮೌಲಾನಾ ಇಮಾಮ ಹುಸೇನ, ಮುಫ್ತಿ ಹುಸೇನ, ಮೌಲನಾ ನೂರಅಹಮದ, ಹಲವಾರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada