ಭುವನೇಶ್ವರ: ಆರೋಪಿ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಗೋಪಾಲ್ ದಾಸ್ ಸಚಿವರನ್ನು ಕೊಲ್ಲುವ “ಸ್ಪಷ್ಟ ಉದ್ದೇಶ” ಹೊಂದಿದ್ದ ಎಂದು ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಒಡಿಶಾ ಪೊಲೀಸರು ತನ್ನ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
60ರ ವಯಸ್ಸಿನ ಸಚಿವರ ಮೇಲೆ ಎಎಸ್ಐ ಗುಂಡು ಹಾರಿಸಿದ ವೇಳೆ ಸ್ಥಳದಲ್ಲಿದ್ದ ಬ್ರಜರಾಜನಗರ ಪೊಲೀಸ್ ಠಾಣೆ ಪ್ರಭಾರಿ ಇನ್ಸ್ಪೆಕ್ಟರ್ (ಐಐಸಿ) ಪ್ರದ್ಯುಮ್ನ್ಯ ಕುಮಾರ್ ಸ್ವೈನ್ ಅವರು ಎಫ್ ಐಆರ್ ನಲ್ಲಿ ಈ ಕುರಿತು ಹೇಳಿದ್ದಾರೆ. ಸಚಿವರು ರವಿವಾರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದರು.
“ಕಾರ್ಯಕ್ರಮಕ್ಕಾಗಿ ಸಂಚಾರ ತೆರವು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗಾಂಧಿ ಚೌಕ್ ಪೊಲೀಸ್ ಔಟ್ಪೋಸ್ಟ್ನ ಎಎಸ್ಐ ಗೋಪಾಲ್ ದಾಸ್ ಇದ್ದಕ್ಕಿದ್ದಂತೆ ಸಚಿವರ ಸಮೀಪಕ್ಕೆ ಬಂದು ತಮ್ಮ ಸರ್ವೀಸ್ ಪಿಸ್ತೂಲ್ನಿಂದ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದ. ಆತನಲ್ಲಿ ಕೊಲ್ಲುವ ಸ್ಪಷ್ಟಉದ್ದೇಶ ಇತ್ತು,” ಎಂದು ಬ್ರಜರಾಜನಗರ ಪೊಲೀಸ್ ಠಾಣೆಯಲ್ಲಿ ಐಐಸಿ ದೂರು ದಾಖಲಿಸಿದ್ದಾರೆ.
ಎಎಸ್ಐ ಗೋಪಾಲ್ ಹಾರಿಸಿದ್ದ 2ನೇ ಸುತ್ತಿನ ಗುಂಡು ಪ್ರಭಾರಿ ಇನ್ಸ್ಪೆಕ್ಟರ್ (ಐಐಸಿ) ಪ್ರದ್ಯುಮ್ನ್ಯ ಕುಮಾರ್ ಉಂಗುರದ ಬೆರಳಿಗೆ ತಗಲಿತ್ತು
ಗುಂಡು ಸಚಿವರ ಎದೆಗೆ ತಗುಲಿ ಅವರು ಕೆಳಗೆ ಬಿದ್ದಿದ್ದಾರೆ. ಸಚಿವರ ದೇಹದ ಮೇಲೆ ಗುಂಡಿನ ಗಾಯದಿಂದ ಅಪಾರ ರಕ್ತಸ್ರಾವವಾಗಿತ್ತು, ಕಾನ್ಸ್ಟೆಬಲ್ ಕೆಸಿ ಪ್ರಧಾನ್ ಅವರೊಂದಿಗೆ ಆರೋಪಿ ಎಎಸ್ಐ ಅನ್ನು ನಾವು ಹಿಡಿದೆವು ಎಂದು ಐಐಸಿ ಹೇಳಿದರು.
https://play.google.com/store/apps/details?id=com.speed.newskannada