ಸಿದ್ದಗಂಗಾ ಮಠದಲ್ಲಿ ಅಸಿಂದೂ ಶಾಸಕ ಗೌರಿಶಂಕರ್ ಹೇಳಿಕೆ. ಇಂದು ಅಧಿಕೃತವಾಗಿ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದೇನೆ. ಚುನಾವಣೆ ಡಿಕ್ಲೇರ್ ಆಗಿದೆ ಅಂತಾ ಕ್ಯಾನವಸ್ ಮಾಡಬೇಕು ಅಷ್ಟೆ. ಯಾಕೆಂದರೆ ಎಲ್ಲಾ ಹಳ್ಳಿಗಳನ್ನು ಸುಮಾರು 20ಸರಿ ಸುತ್ತಿದ್ದೇನೆ. ಸುಮ್ನೆ ಸುತ್ತಿಲ್ಲ ಜನರ ಜೊತೆ ಮಾತಾನಾಡಿಸಿ ಗೌರವ ಕೊಟ್ಟು ಕೆಲಸ ಮಾಡಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರ ಆರ್ಶಿವಾದ, ದೇವೆಗೌಡ್ರು, ಕುಮಾರಸ್ವಾಮಿ, ನಮ್ಮ ತಂದೆ ತಾಯಿ ಆರ್ಶಿವಾದ. ವಿಶೇಷವಾಗಿ ನಾವು ನಂಬಿರುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು, ಎಲ್ಲರ ಆರ್ಶಿವಾದದಿಂದ ಪ್ರಚಾರ ಶುರು ಮಾಡ್ತಾ ಇದೀನಿ. ಊರ್ಡಿಗೆರೆ ಹೋಬಳಿಯ ಸೀತ್ಕಲ್ಲು, ಅರೆಗುಡ್ಡನ ಹಳ್ಳಿ, ಊರ್ಡಿಗೆರೆ ಸೇರಿದಂತೆ ಮೂರು ಪಂಚಾಯಿತಿಗಳಂತೆ ಶುರು ಮಾಡಿದ್ದೇನೆ. ಒಂದು ದಿನಕ್ಕೆ ಮೂರು ಪಂಚಾಯಿತಿ ವ್ಯಾಪ್ತಿ ಸುತ್ತಬೇಕು ಅಂತಾ ತೀರ್ಮಾನ ಮಾಡಿದ್ದೇನೆ. 17ಕ್ಕೆ ಅಧಿಕೃತ ವಾಗಿ ನ್ಯಾಮಿನೇಷನ್ ಮಾಡ್ತಿನಿ. ಮಾಜಿ ಶಾಸಕ ಸುರೇಶ್ ಗೌಡ ನೀತಿ ಸಂಹಿತೆ ಉಲ್ಲಂಘನೆ ವಿಚಾರ ಇಲ್ಲಿ ಹೇಳೋರು ಕೇಳೋರು ಇಲ್ಲ ಪೊಲೀಸ್ ನವರನ್ನು ಹಾಗಾಗಿದೆ ಇಲ್ಲಿ ಎಲ್ಲಾ ಸೇಲ್ ಆಗ್ಬಿಟ್ಟಿದ್ದಾರೆ ಪೊಲೀಸ್ ನವ್ರು ಚುನಾವಣಾ ಆಯೋಗ 10ಗಂಟೆ ಮೇಲೆ ಕ್ಯಾನ್ ವಾಸ್ ಮಾಡೊಂಗಿಲ್ಲ ಅಂತ ಹೇಳಿದ್ರು 11.30ರವರೆಗೂ ಮಾಡಿದ್ದಾರೆ. ಪ್ರಶ್ನೆ ಮಾಡಲಿಕ್ಕೆ ಹೋಗಿದ್ದಕ್ಕೆ ಬಿಜೆಪಿ ಅವ್ರು ನಮ್ಮ ಕಾರ್ಯರ್ತರ ಮೇಲೆ ಗುಂಡಾಗಿರಿ ಮಾಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ..! ಇಲ್ಲಿ ಗುಂಡಾಗಿರಿ ನಡೆಯುತ್ತಿದೆ ಪೊಲೀಸ್ ನವ್ರು ಏನ್ ಮಾಡ್ತಾ ಅವ್ರೆ? ಎಲ್ಲೊ ಒಂದು ಕಡೆ ಪೊಲೀಸ್ ನವ್ರು ಬಿಜೆಪಿಯ ಏಜೆಂಟ್ ಗಳಾಗಿದ್ದಾರೆ. ಅದು ನಮ್ಮತಾಲ್ಲೂಕಿನಲ್ಲಿ ನಡೆಯುತ್ತಿದೆ. ನಾಳೆ ಡಿ.ಸಿ.ಮತ್ತು ಎಸ್ಪಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ಕೋಡಬೇಕು ಅಂತಾ ತೀರ್ಮಾನ ಮಾಡಿದ್ದೇನೆ. ದೂರು ಕೊಡ್ತಿನಿ. ಗೌರಿಶಂಕರ್ ಚುನಾವಣೆ ಸ್ಪರ್ಧೆ ವಿಚಾರ. ಏನು ಇಲ್ಲ..ಯಾವ ಗೊಂದಲ.. ಏನೂಕ್ಕೆ ಗೊಂದಲ ಮಾಡಿಕೊಳ್ಳಬೇಕು. ಚುನಾವಣೆಗೆ ಹೊರಟ್ಟಿದ್ದೇವೆ ಚುನಾವಣೆ ಮಾಡ್ತಿವಿ. ಗೊಂದಲ ಮಾಡ್ತಿರೋದು ಯಾರು ವಿರೋದ ಪಕ್ಷದವರು. ಕೈಲಾಗದಂತವರು. ಹಿಂಬಾಗಿಲಿನಿಂದ ರಾಜಕಾರಣ ಮಾಡಲಿಕ್ಕೆ ಹೊರಟ್ಟಿರೋದು ನಾನಲ್ಲ ಎಂದು ಪರೋಕ್ಷವಾಗಿ ಸುರೇಶ್ ಗೌಡ ವಿರುದ್ದ ವಾಗ್ದಾಳಿ. 100% ನಾನೇ ಕ್ಯಾಂಡಿಡೇಟ್ ನಾನೇ ಕಣದಲ್ಲಿ ಇರ್ತಿನಿ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗೌರಿಶಂಕರ್ ಹೇಳಿಕೆ.
https://play.google.com/store/apps/details?id=com.speed.newskannada