ಬೆಂಗಳೂರು: ತೆಲುಗಿನ ಹಾಗೂ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ ಆದ ‘RRR’ ನಾಳೆ ರಿಲೀಸ್ ಆಗಲಿದ್ದು ಇದರಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ‘ ಜೇಮ್ಸ್ ‘ ಅನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಕಿಚ್ಚು ವ್ಯಾಪಿಸುತ್ತಿದ್ದಂತೆ ನಟ ಶಿವರಾಜ್ಕುಮಾರ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಸುದ್ದಿಗೋಷ್ಠಿ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಯ್ನತಿಸಿದರು . ಈ ಸಂದರ್ಭದಲ್ಲಿ ಮಾತಾಡಿದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ , ‘ ಥಿಯೇಟರ್ ಸಮಸ್ಯೆ ಬರುತ್ತೆ – ಹೋಗುತ್ತೆ . ಮಾತುಕತೆ ಕೆಲವು ಸಲ ಅಗ್ರಿಮೆಂಟ್ನಲ್ಲಿ ಆಗುತ್ತೆ , ಕೆಲವು ಟೈಮ್ ಮಾತಿನ ಮೇಲೆ ನಿಂತಿರುತ್ತೆ . ಡಿಸ್ಟ್ರಿಬ್ಯೂಟರ್ ಹಾಗೂ ಎಕ್ಸಿಬ್ಯೂಟರ್ಗಳ ಮಧ್ಯೆ ಯಾವ ರೀತಿ ಮಾತುಕತೆ ಆಗಿತ್ತೋ ಅದು ಗೊತ್ತಿಲ್ಲ . ಆದರೆ , ನಾನು ಎಲ್ಲರ ಪರವಾಗಿ ನಿಲ್ತೀನಿ . ನಮ್ಮ ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಇದ್ದಂತೆ . ಸಿಎಂ ಮಾತನಾಡಿದ್ದಾರೆ , ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ’ ಎಂದಿದ್ದಾರೆ.’ಅಭಿಮಾನಿಗಳು ಆತಂಕ ಪಡಬೇಡಿ . ನನ್ನ ತಮ್ಮನ ಸಿನಿಮಾ ಅಂತ ನಾನು ಬಂದು ಮಾತನಾಡಿಲ್ಲ . ಯಾವ ಕನ್ನಡ ಸಿನಿಮಾ ಬಂದರೂ ನಾನು ಮುಂದಾಳತ್ವ ವಹಿಸ್ತೇನೆ ‘, ಎಂದು ಹೇಳಿದ್ದಾರೆ . ಇದಿಷ್ಟೆ ಅಲ್ಲದೇ , ತಮ್ಮ ಮಾತನ್ನು ಮುಂದುವರಿಸಿದ ಶಿವಣ್ಣ ‘ ಯಾವುದೇ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿ ಅದನ್ನು ತೆಗೆಯಬಾರದು . ಅದು ಯಾವುದೇ ಸಿನಿಮಾವಾಗಿದ್ದರೂ ನಾವು ಅವರ ಪರವಾಗಿ ನಿಲ್ಲಬೇಕು . ಅತೀ ಹೆಚ್ಚು ಹಣ ಸಿಗುತ್ತದೆ ಎಂದು ಚಿತ್ರಮಂದಿರದವರು , ಥಿಯೇಟರ್ ಓನರ್ಗಳು ಆಸೆ ಪಡೋಕೆ ಹೋಗಬಾರದು ‘, ಎಂಬ ಕಿವಿ ಮಾತನ್ನು ಶಿವಣ್ಣ ಹೇಳಿದ್ದಾರೆ . ಈಗಾಗಲೇ ‘ ದಿ ಕಾಶ್ಮೀರ್ ಫೈಲ್ಸ್ ‘ ಎಂಬ ಹಿಂದಿ ಚಿತ್ರದಿಂದ ಕನ್ನಡದ ‘ ಹರೀಶ್ ವಯಸ್ಸು 36’ ಸಿನಿಮಾಗೆ ಸಿಕ್ಕಾಪಟ್ಟೆ ಲಾಸ್ ಆಗಿದೆ . ಮಂಗಳೂರಿನಲ್ಲಿ ಹಲವು PVR ಸ್ಕ್ರೀನ್ಗಳನ್ನು ಕಿತ್ತುಕೊಂಡು ‘ ದಿ ಕಾಶ್ಮೀರ್ ಫೈಲ್ಸ್ ‘ ಚಿತ್ರವನ್ನು ಅಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂಬ ವಿಷಯ ಇಡೀ ರಾಜ್ಯಕ್ಕೆ ಗೊತ್ತಾಗಿದೆ .
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada