ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಕೋವಿಡ್ ಸೋಂಕು ತಗುಲಿರೋದು ದೃಢಪಟ್ಟಿದೆ. ಇತ್ತೀಚಿಗಷ್ಟೆ ಕೋಲಾರ ಜಿಲ್ಲೆ ಮುಳಬಾಗಿಲಲ್ಲಿ ಡಿ.ವಿ.ಗುಂಡಪ್ಪ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ , ನಾಲ್ಕೈದು ದಿನಗಳಿನಿಂದ ಪ್ರವಾಸದ ಮೇಲೆ ಪ್ರವಾಸ ಮಾಡಿ ತಮ್ಮ ಆರೋಗ್ಯದ ಸ್ಥತಿಯನ್ನ ಹದಗೆಸಿಕೊಂಡಿದ್ದರು. ಇದೀಗ ಸೋಂಕು ತಗುಲಿರೋದು ಬಹಳಷ್ಟು ನೋವುಂಟು ಮಾಡಿದೆ. ಹೊಸ ವರ್ಷದ ಮೊದಲ ದಿನವೇ ತಮಗೆ ಸ್ವಲ್ಪ ಜ್ವರ ಹಾಗು ಗಂಟಲು ಕೆರೆತ ಇದ್ದುದ್ದರಿಂದ ತಕ್ಷಣವೇ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದರೆ. ತಮಗೆ ಸೋಂಕು ತಗುಲಿರೋದು ಗೊತ್ತಾದ ತಕ್ಷಣವೆ ತಮ್ಮ ಸಂಪರ್ಕದಲ್ಲಿದ್ದವರೆಲ್ಲರಿಗು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.