ಯಾರಾದ್ರು ಕರೆ ಮಾಡಬೇಕು ಅಂತ ಮೊಬೈಲ್ ಕೇಳಿದ್ರೆ ಎಚ್ಚರ ಎಚ್ಚರ.!

 

ಅಪರಿಚಿತರಿಗೆ ನಿಮ್ಮ ಮೊಬೈಲ್ ಕೊಡವ ಮುನ್ನ ಎಚ್ಚರಿಕೆ ವಹಿಸಿ‌.

ಮತ್ತಿಕೆರೆಯ ದೇವವ್ರಾತ್ ಸಿಂಗ್ ಎಂಬಾತನ ಮೊಬೈಲ್ ಪಡೆದಿದ್ದ ಆರೋಪಿ.

ನನ್ನ ಮೊಬೈಲ್ ಕೆಟ್ಟಿದೆ,ಕರೆ ಮಾಡಬೇಕು ಅಂತ ಹೇಳಿ ಮೊಬೈಲ್ ಪಡೆದಿದ್ದ ಪವನ್.

ಯುವಕ ದೇವವ್ರಾತ್ ಸಿಂಗ್ ಮೊಬೈಲ್ ಕೊಡೊಮುನ್ನ ಅನ್ ಲಾಕ್ ಮಾಡಿ ಕೊಟ್ಟಿದ್ದ.

ಅನ್ ಲಾಕ್ ಪ್ಯಾಟರ್ನ್ ಗಮನಿಸಿದ್ದ ಆರೋಪಿ ಪವನ್.

ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಎಸ್ಕೇಪ್.

ನಂತರ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ ವೀಡಿಯೋ ನೋಡಿದ್ದಾನೆ.

ದೇವವ್ರಾತ ಸಿಂಗ್,ಹಾಗು ಪ್ರೇಯಸಿಯ ಖಾಸಗಿ ಫೋಟೋಗಳನ್ನ ಗಮನಿಸಿದ್ದಾನೆ.

ನಂತರ ದೇವವ್ರಾತ್ ಸಿಂಗ್ ಗರ್ಲ್ ಫ್ರೆಂಡ್ ಗೆ ಕರೆ ಮಾಡಿ ಖಾಸಗಿ ಫೋಟೋಗಳನ್ನ ಲೀಕ್ ಮಾಡುವುದಾಗಿ ಬೆದರಿಕೆ.

ಫೋಟೊ ಲೀಕ್ ಮಾಡಬಾರದು ಅಂದ್ರೆ1 ಲಕ್ಷ ಹಣ ಕೊಡಬೇಕು ಅಂತ ಬೆದರಿಕೆ.

ಇಷ್ಟು ಸಾಲದು ಅಂತ ಯುವತಿಗೆ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸಿದ್ದಾನೆ.

ಅಲ್ಲದೇ ದೇವವ್ರಾತ್ ಸಿಂಗ್ ತಾಯಿಗೂ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್.

ನಂತರ ದೇವವ್ರಾತ್ ಸಿಂಗ್ ನಿಂದ ಸ್ಥಳೀಯ ಪೊಲೀಸ್ ಠಾಣೆಗೆ ದೂರು.

ದೂರು ದಾಖಲಿಸಕೊಂಡ ಇನ್ಸ್ ಪೆಕ್ಟರ್ ಸುರೇಶ್ .

ಹಣ ಕೊಡೊದಾಗಿ ಕರೆಸಿ ಆರೋಪಿ ಪವನ್ ಅರೆಸ್ಟ್.
…..
ಇನ್ನು ವಿಚಾರಣೆ ವೇಳೆ ಆರೋಪಿ ಪವನ್ ಡ್ರಗ್ ಪೆಡ್ಲರ್ ಜೊತೆ ನಂಟು ಬೆಳಕಿಗೆ.

ಡ್ರಗ್ ಪೆಡ್ಲರ್ ಸೈಯದ್ ನಿಯಾಜ್ ಜೊತೆ ಡ್ರಗ್ಸ್ ಮಾರಾಟ‌.

ಪವನ್ ಮಾಹಿತಿ ಮೇರೆಗೆ ಸೈಯದ್ ನಿಯಾಜ್ ಬಂಧನ.

ಬಂಧಿತನಿಂದ 3.45 ಲಕ್ಷ ಬೆಲೆಬಾಳುವ ಎಂಡಿಎಂಎ,560 ಗ್ರಾಂ ಗಾಂಜಾ, ಮೊಬೈಲ್ ಫೋನ್,ಒಂದು ಕಾರ್,ಎಕ್ಸಟೆಸಿ ಟ್ಯಾಬ್ಲೆಟ್ ಪೌಡರ್ ವಶಕ್ಕೆ.

ಸದ್ಯ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿರುವ ಯಶವಂತಪುರ ಠಾಣೆಯ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ (Tuesday, January 3, 2023)

Tue Jan 3 , 2023
ತುಂಬಾ ಪ್ರಯಾಣ ನಿಮಗೆ ದಣಿವಾಗಿಸುತ್ತದೆ ಇಂದು ನೀವು ಆಲ್ಕೊಹಾಲ್ಯುಕ್ತ ಮದ್ಯವನ್ನು ಸೇವಿಸಬಾರದು, ಮಾದಕತೆಯ ಸಂದರ್ಭದಲ್ಲಿ ನೀವು ಯಾವುದೇ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳಬಹುದು. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ನೀವು ಸಂತೋಷ ನೀಡುವ ಮೂಲಕ ಮತ್ತು ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಸಮರ್ಥಗೊಳಿಸಲಿದ್ದೀರಿ. ನೀವು ಯಾವುದೇ ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ […]

Advertisement

Wordpress Social Share Plugin powered by Ultimatelysocial