ಹಿಂದೂ ಸಂಪ್ರದಾಯದಲ್ಲಿ ವೀಗೆ ಮಹತ್ವವಾದ ಸ್ಥಾನವಿದೆ. ದೇವರ ಪೂಜೆಯಿಂದ ಹಿಡಿದು ಎಲ್ಲಾ ಶುಭಕಾರ್ಯದಲ್ಲೂ ವೀಳ್ಯದೆಲೆ ಇರಲೇಬೇಕು. ಊಟ ಆದ ಮೇಲೆ ವೀಳ್ಯದೆಲೆ ಸೇವಿಸುವ ಖಷಿಯೇ ಬೇರೆ. ನಮ್ಮ ಹಿರಿಯರು ಹಿಂದಿನ ಕಾಲದಿಂದಾನೂ ಈ ಆಚರಣೆಯನ್ನ ರೂಢಿಸಿಕೊಂಡು ಬಂದಿದ್ದಾರೆ.ಆಯುರ್ವೇದದಲ್ಲಿ ವೀಳ್ಯದೆಲೆ ತನ್ನದೇ ಆದ ಸ್ಥಾನವಿದೆ. ತಾಂಬೂಲದ ಜೊತೆಯಲ್ಲಿ ವೀಳ್ಯದೆಲೆ ಇರಲೇಬೇಕು. ಇಂತಹ ಶುಭಕರ ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ನಿಯಾಸನ್, ರೈಬೋಫ್ಲೇವಿನ್,ಕೆರಟೀನ್, ಮತ್ತು ಕ್ಯಾಲ್ಸಿಯಂನಂತಹ ಗುಣಗಳಿದ್ದು, ಆರೋಗ್ಯ ಉದ್ದೇಶದಿಂದ ತುಂಬಾನೇ ಒಳ್ಳೆಯದು.ಎಲೆ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತ ಎಂಬ ನಂಬಿಕೆ ಅನೇಕರಲ್ಲಿ ಇದೆ. ಆದ್ರೆ ನಿಜವಾಗಿಯೂ ವೀಳ್ಯದೆಲೆಯಿಂದ ಯಾವುದೇ ಅಪಾಯವಿಲ್ಲ. ತಂಬಾಕಿನಲ್ಲಿ ಮಾತ್ರ ಕ್ಯಾನ್ಸರ್ಕಾರಕ ಗುಣಗಳಿರುವುದು. ವೀಳ್ಯದೆಲೆಯಲ್ಲಿ ಪೈಟೋಕೆಮಿಕಲ್ ಗುಣಗಳಿದ್ದು, ಅದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.ವೀಳ್ಯದೆಲೆ ಸೇವನೆಯಿಂದ ನಮ್ಮಲ್ಲಿ ಪ್ರೋಟಿನ್ ಅಂಶ ಹೆಚ್ಚಾಗುತ್ತದೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ಗಾಯಗಳಾದಾಗ ವೀಳ್ಯದೆಲೆಯ ಪೇಸ್ಟ್ ತಯಾರಿಸಿ ಹಚ್ಚಿದರೆ ಗಾಯ ಬೇಗ ಒಣಗುವಂತೆ ಮಾಡಿ ಕೆಲವೇ ದಿನಗಳಲ್ಲಿ ಗಾಯ ಒಣಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada