ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಮಿಂಚಿದ ರೂಪೇಶ್ ಶೆಟ್ಟಿ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬಿಗ್ ಬಾಸ್ ಬಳಿಕ ರೂಪೇಶ್ ಶೆಟ್ಟಿ ಮತ್ತೆ ಕಿರುತೆರೆಗೆ ಮರಳಿದ್ದಾರೆ.ದೊಡ್ಮನೆಯಲ್ಲಿ ಹಾಡು, ಡ್ಯಾನ್ಸ್, ಮನರಂಜನೆ ಅಂತಾ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡ ಮಂಗಳೂರಿನ ಪ್ರತಿಭೆ ರೂಪೇಶ್ ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ಗೆಲುವನ್ನ ವಿಜೃಂಭಿಸುವುದರಲ್ಲಿ ಬ್ಯುಸಿಯಾಗಿದ್ದರು.
ಬಳಿಕ `ಮಂಕು ಭಾಯಿ ಫಾಕ್ಸಿ ರಾಣಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ದೊಡ್ಮನೆಗೆ ಕಾಲಿಡುವ ಮುಂಚೆ ಚಿತ್ರೀಕರಿಸಿದ ಸಿನಿಮಾ ಇದಾಗಿತ್ತು.ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ರು ಕೂಡ ತಮ್ಮ ಮುಂದಿನ ಹೆಜ್ಜೆ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಇದೀಗ `ಒಲವಿನ ನಿಲ್ದಾಣ’ ಸೀರಿಯಲ್ ಮೂಲಕ ರೂಪೇಶ್ ಶೆಟ್ಟಿ ಕಿರುತೆರೆಗೆ ಮರಳಿದ್ದಾರೆ. ನಾಯಕಿ ತಾರಿಣಿ ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಅತಿಥಿಯಾಗಿ ರೂಪೇಶ್ ನಾಯಕಿಗೆ ಸಾಥ್ ನೀಡಲು ಒಲವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.
ಧೀರಜ್ ಮತ್ತು ಸಿದ್ಧಾಂತ್ ಈ ಇಬ್ಬರಲ್ಲಿ ಯಾರನ್ನ ಮದುವೆಯಾಗಲಿ ಎಂದು ಗೊಂದಲದಲ್ಲಿರುವ ತಾರಿಣಿಗೆ ಪರಿಹಾರ ನೀಡಲು ಬರುತ್ತಿದ್ದಾರೆ. ಈ ಮೂಲಕ ಟಿವಿ ಪರದೆಯಲ್ಲಿ ಮತ್ತೆ ಮಿಂಚಲು ರೂಪೇಶ್ ಶೆಟ್ಟಿ ಸಜ್ಜಾಗಿದ್ದಾರೆ. ಇನ್ನೂ ಈ ಕುರಿತ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಆರ್ಜೆ ಆಗಿ ರೂಪೇಶ್ ಕಾಣಿಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada