ಮುಖದ ಕಾಂತಿ ದುಪ್ಪಟ್ಟು ಮಾಡುತ್ತೆ ಕಹಿಬೇವು…!

ಹಿಬೇವು ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯುಗಾದಿ ಹಬ್ಬ ಬಂತು ಅಂದ್ರಂತೂ ಎಲ್ಲರ ಮನೆಯಲ್ಲಿ ಕಹಿಬೇವು ಇರುತ್ತೆ. ಈ ಕಹಿಬೇವು ಆರೋಗ್ಯಕ್ಕೆ ತುಂಬಾನೇ ಉಪಕಾರಿ ಅಂತಾ ಆರ್ಯುವೇದ ಹೇಳಿದೆ. ಅಂತೆಯೇ ತ್ವಚೆಯ ಆರೈಕೆಗೂ ಕಹಿಬೇವು ತುಂಬಾನೇ ಸಹಕಾರಿ.

ಮುಖದಲ್ಲಿನ ಮೊಡವೆ ಕಲೆಗಳನ್ನ ನಿವಾರಣೆ ಮಾಡೋದ್ರಲ್ಲಿ ಕಹಿಬೇವಿನ ಎಲೆ ಪ್ರಮುಖ ಪಾತ್ರ ವಹಿಸುತ್ತೆ .

ಇದಕ್ಕಾಗಿ ನೀವು ಕಹಿಬೇವು ಎಲೆಗಳನ್ನ ಒಣಗಿಸಿ ಬಳಿಕ ಅದನ್ನ ಪೌಡರ್​ ರೀತಿ ರುಬ್ಬಿಟ್ಟುಕೊಳ್ಳಿ. ಇದಕ್ಕೆ ನಿತ್ಯ ರೋಸ್​ ವಾಟರ್​ ಇಲ್ಲವೇ ನೀರನ್ನ ಹಾಕಿ ನಿತ್ಯ ಮುಖಕ್ಕೆ ಹಚ್ಚಿಕೊಳ್ಳಿ. ಕೆಲ ನಿಮಿಷಗಳಲ್ಲೇ ಮುಖವನ್ನ ತೊಳೆದುಕೊಳ್ಳಿ. ಈ ರೀತಿ ಮಾಡೋದ್ರಿಂದ ಮೊಡವೆ ಕಲೆಗಳು ಮಂಗಮಾಯವಾಗುತ್ತೆ.

ಒಂದು ಲೀಟರ್​ ನೀರಿನಲ್ಲಿ ಒಂದು ಮುಷ್ಟಿಯಷ್ಟು ಕಹಿಬೇವು ಹಾಕಿ ಬೇಯಿಸಿ. ನೀರಿನ ಬಣ್ಣ ಬದಲಾಗುತ್ತಿದ್ದಂತೆ ಎಲೆಯನ್ನ ತೆಗೆದು ಆ ನೀರನ್ನ ಬಾಟಲ್ ನಲ್ಲಿ ತುಂಬಿಟ್ಟುಕೊಳ್ಳಿ. ಇದನ್ನ ನೀವು ಟೋನರ್​ ರೀತಿ ಬಳಸಬಹುದು. ನಿತ್ಯ ಮಲಗುವ ಮುನ್ನ ಇದನ್ನ ಮುಖಕ್ಕೆ ಹಚ್ಚಿಕೊಂಡು ಮಲಗೋದ್ರಿಂದ ವೈಟ್​ಹೆಡ್ಸ್, ಬ್ಲಾಕ್​ ಹೆಡ್ಸ್ ಸಮಸ್ಯೆಯಿಂದ ಪಾರಾಗಬಹುದು.‌

ಕಹಿಬೇವಿನ ಎಣ್ಣೆಯನ್ನ ನಿತ್ಯ ಮಲಗುವ ಮುನ್ನ ಮುಖಕ್ಕೆ ಲೇಪಿಸಿ ಬೆಳಗ್ಗೆ ತಣ್ಣೀರಿನಿಂದ ವಾಶ್​ ಮಾಡಿ. ಇದ್ರಿಂದ ನಿಮ್ಮ ಮುಖದ ಕಾಂತಿ ಇನ್ನಷ್ಟು ಹೆಚ್ಚಲಿದೆ. ಫಂಗಸ್​ ಸೋಂಕು ತಾಕಿದ ಉಗುರಿಗೆ ಈ ಎಣ್ಣೆಯಿಂದ ಮಸಾಜ್​ ಮಾಡೋದ್ರಿಂದ ಫಂಗಸ್​ ಸೋಂಕು ಕಡಿಮೆಯಾಗಲಿದೆ.

ಮುಖ ಶ್ವೇತವರ್ಣ ಆಗಬೇಕು ಅಂದ್ರೂನೂ ನೀವು ಕಹಿಬೇವು ಬಳಕೆ ಮಾಡಬಹುದು. ಇದಕ್ಕಾಗಿ ನೀವು ಕಹಿಬೇವನ್ನ ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಬಳಿಕ ಇದನ್ನ ಪೌಡರ್​ ಮಾಡಿಕೊಳ್ಳಿ. ಇದಕ್ಕೆ ರೋಸ್​ ವಾಟರ್​, ಮೊಸರು ಹಾಗೂ ಸ್ವಲ್ಪ ಹಾಲನ್ನ ಸೇರಿಸಿ ಪೇಸ್ಟ್ ಮಾಡಿ. ಇದನ್ನ ನಿತ್ಯ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಬಳಿಕ ವಾಶ್​ ಮಾಡಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ನಿಮಗೆ ತಿಳಿಯಲಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ರೈತರಿಗೆ ಸಿಹಿ ಸುದ್ದಿ: ಯುಗಾದಿ ಉಡುಗೊರೆಯಾಗಿ ಖಾತೆಗೆ 2000 ರೂ. ಜಮಾ!

Wed Mar 22 , 2023
    ಬಾಗಲಕೋಟೆ: ರಾಜ್ಯದ ರೈತರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರಿಗೆ 975 ಕೋಟಿ ರೂ. ಜಮಾ ಮಾಡಲಾಗಿದೆ. ರಾಜ್ಯದ 48,75.000 ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022 -23ನೇ ಸಾಲಿನ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಪಿಎಂ ಕಿಸಾನ್ ಕರ್ನಾಟಕ ವಿಭಾಗದಿಂದ […]

Advertisement

Wordpress Social Share Plugin powered by Ultimatelysocial