ಯಳಂದೂರು ಪಟ್ಟಣದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಬಿರುಸಿನ ಪ್ರಚಾರ ಕೈಗೊಂಡರು. ಪಟ್ಟಣದ ಪ್ರಮುಖ ಬಡಾವಣೆ ಗಳಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್,ನಟ ನಿರ್ದೇಶಕ ಎಸ್.ಮಹೇಂದರ್ ಹಾಗೂ ಪಟ್ಟಣದ ಮುಖಂಡರು ಮತ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಗೌತಮ್ ಬಡಾವಣೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಎನ್.ಮಹೇಶ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು.
ಇದಕ್ಕೆ ಉತ್ತರವಾಗಿ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಮಾತನಾಡಿ ನನ್ನ ಬಗ್ಗೆ ಕೆಲವು ಕೆಲಸಕ್ಕೆ ಬಾರದ ವ್ಯಕ್ತಿಗಳು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ,ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕೋವಿಡ್ ನಂತರ ಎರಡು ವರ್ಷದಲ್ಲಿ ಹಲವಾರು ಅಭಿರುದ್ದಿ ಕಾರ್ಯಗಳನ್ನು ಮಾಡಿದ್ದೇನೆ,5 ವರ್ಷ ಪೂರ್ತಿ ಸಿಕ್ಕರೆ ಉಳಿದ ಕೆಲಸಗಳನ್ನು ಮುಗಿಸಿ ಹೊಸ ಯೋಜನೆಗಳನ್ನು ನೀಡುತ್ತೇನೆ. ಅಭಿರುದ್ದಿ ಕೆಲಸ ಮಾಡಲು ಚುನಾವಣೆಗೆ ಬಂದಿದ್ದೇನೆ, ಮಜಾ ಮಾಡಲು ಬಂದಿಲ್ಲ,ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಉಳಿದ ಎಲ್ಲಾ ಕೆಲಸ ಗಳನ್ನು ಪೂರ್ಣ ಮಾಡುತ್ತೇನೆ.
ಬಾಬಾ ಸಾಹೇಬರ ದಾರಿಯಲ್ಲಿ ರಾಜಕಾರಣ ಮಾಡುತ್ತಿರುವುದು ನಾನು,ವಿಧಾನಸೌದದ ಇತಿಹಾಸದಲ್ಲಿ ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಮಾಡಿದ್ದೂ ನಾನೇ,ಬಿಜೆಪಿ ರವರು ಸಂವಿಧಾನ ಬದಲಾಯಿಸುತ್ತಾರೆ ಅಂತ ಹೇಳ್ತಿರಿ,ಸಂಸದ ಶ್ರೀನಿವಾಸ್ ಪ್ರಸಾದ್ ಅಣ್ಣ ಹೇಳಿಲ್ವ ಸಂವಿಧಾನ ಬದಲಾಯಿಸಲು ಅದೇನ್ ಮಗ್ಗಿ ಪುಸ್ತಕನಾ ಅಂತ,ಅರಿಹರ ಬ್ರಹ್ಮ ಬಂದರು ಬದಲಾಯಿಸಲು ಆಗಲ್ಲ,ಹುಚ್ಚರಾಗಿ ನೀವು ಅಪಪ್ರಚಾರ ಮಾಡಬೇಡಿ,ನಾನು ರಾಜಕಾರಣ ಮಾಡುತ್ತಿರುವುದೇ ಪಕ್ಕ ಅಂಬೇಡ್ಕರ್ ವಾದಿ ರಾಜಕಾರಣ,ಕಾಂಗ್ರೆಸ್ ನವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸತ್ತಾಗ ಮಣ್ಣು ಮಾಡಲು ಜಾಗ ಕೊಡಲಿಲ್ಲ,ನನ್ನ ಧ್ವನಿಯನ್ನು ವಿಧಾನಸಭೆಯಲ್ಲಿ ಗಟ್ಟಿಯಾಗಿ ನಿಲ್ಲಿಸಿ ನನಗೆ ಮತ್ತೊಂದು ಬಾರಿ ಅವಕಾಶ ನೀಡಿ ಎಂದು ಹೇಳಿದರು…
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್,ನಟ ನಿರ್ದೇಶಕ ಎಸ್.ಮಹೇಂದರ್,ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್,ಚಾಮುಲ್ ಅಧ್ಯಕ್ಷ ನಾಗೇಂದ್ರ,ಕಂದಹಳ್ಳಿ ಮಹೇಶ್,ವೈ.ಕೆ.ಮೊಳೆ ದೊರೆಸ್ವಾಮಿ ಉಪ್ಪಾರ್,ಭೀಮಪ್ಪ,ನಾಮ ನಿರ್ದೇಶಿತ ಸದಸ್ಯರಾದ ಟೈಗರ್ ಮಹೇಶ್,ರಘು ನಾಯಕ್,ಪಟ್ಟಣ ಪ್ರಮುಖ ನಾಯಕರು,ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
https://play.google.com/store/apps/details?id=com.speed.newskannada