ನಂಜನಗೂಡು ಉಪಚುನಾವಣೆಯಲ್ಲಿ ಸೋತು ಏಳು ವರ್ಷಗಳೇ ಕಳೆದರೂ ಇನ್ನು ಸೋಲಿನ ಹತಾಶೆಯಿಂದ ಹೊರಬರದ ಸಂಸದ ಶ್ರೀನಿವಾಸ್ ಪ್ರಸಾದ ಸೋಲಿಗೆ ಕಾರಣರಾದ ಕಾಂಗ್ರೆಸ್ ನಾಯಕರ ವಿರುದ್ಧ ಪದೇ ಪದೇ ಸೇಡಿನ ಕಿಡಿಕಾರುತ್ತಿದ್ದಾರೆ ನಂಜನಗೂಡಿನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಸಂಸದರು ಉಪಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ಕಳಲೆ ಕೇಶವಮೂರ್ತಿ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಮಾಜಿ ಸಚಿವ ಎಚ್ ಸಿ ಮಹದೇವಪ್ಪ ,ಮಾಜಿ ಸಂಸದ ದ್ರುವನಾರಾಯ ವಿರುದ್ಧ ವ್ಯಂಗ್ಯ ದಮಾತುಗಳನಾಡಿದ್ದಾರೆ .ಜೆಡಿಎಸ್ ನಲ್ಲಿದ್ದ ಕೇಶಮೂರ್ತಿಯನ್ನು ರಾಜೀನಾಮೆ ಕೊಡಿಸಿ ಕರೆತಂದು ದೊಡ್ಡ ನಾಯಕನಂತೆ ಬಿಂಬಿಸಿ ನನ್ನ ವಿರುದ್ಧ ನಿಲ್ಲಿಸಿದ್ದ ಆತನನ್ನು ಈಗ ಒದ್ದೋಡಿಸಿದ್ದಾರೆ ಅವನು ದನ ಕಾಯ್ತಾ ಇರಬೇಕು ಎಂದು ಛೇಡಿದರು .ಈಗ ಅವನ ಸ್ಥಾನಕ್ಕೆ ಮಾದೇವಪ್ಪ ಮತ್ತು ಧ್ರುವನಾರಾಯಣ ಇಬ್ಬರೂ ಕಚ್ಚಾಡುತ್ತಿದ್ದಾರೆಇನ್ನು ಉಪಚುನಾವಣೆಯಲ್ಲಿ ನನ್ನ ವಿರುದ್ಧ ಆಟ ಆಡಿದ ಸಿದ್ದರಾಮಯ್ಯ ಪಂಚೆ ಎತ್ತಿ ಕಟ್ಟಿಕೊಂಡು ಕೋಲಾರಕ್ಕೆ ಹೋದರು ಮಹದೇವಪ್ಪ ನರಸೀಪುರದಲ್ಲಿ ಅವಿತುಕೊಂಡಿದ್ದಾನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಲೇವಡಿ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada