ಧಾರವಾಡದಲ್ಲಿ ಐಐಟಿ ಆಗೋಕೆ ಕಾರಣವೇ ಕಾಂಗ್ರೆಸ್
ವಿಡಿಯೋ ಮೂಲಕ ಐಐಟಿ ಮಾಡಿದ್ದು ನಾವೇ ಎಂದ ಮಾಜಿ ಸಚಿವ ವಿನಯ್ ಕುಲಕರ್ಣಿ
ಐಐಟಿ ಉದ್ಘಾಟನೆ ಆಗುತ್ತಿದ್ದು ಖುಷಿ ತಂದಿದೆ
ಐಐಟಿ ಬಂದ ವೇಳೆ ರಾಯಚೂರಿಗೆ ಹೋಗಬೇಕು ಅಂತ ಚರ್ಚೆ ಆಗಿತ್ತು
ಅದರ ನಂತರ ಮೈಸೂರಿಗೆ ಐಐಟಿ ಆಗಬೇಕು ಎಂದು ಚರ್ಚೆಯಾಗಿತ್ತು
ಆಗ ನಾವೆಲ್ಲರೂ ಧಾರವಾಡಕ್ಕೆ ಬರಬೇಕು ಅಂತ ಒತ್ತಾಯ ಹಾಕಿದ್ವಿ
ಆಗ ಆದರೂ ರಾಯಚೂರು ಹಾಗೂ ಮೈಸೂರಿಗೆ ಐಐಟಿ ವರ್ಗಾವಣೆಯಾಯಿತು
ಮರಳಿ ಅದನ್ನ ತರಲು ನಾವೆಲ್ಲ ದೊಡ್ಡ ಹೋರಾಟ ಮಾಡಬೇಕಾಯಿತು
ಅಂದು ಹೋರಾಟದ ಪ್ರತಿಫಲ ಇಂದು ಐಐಟಿ ಉದ್ಘಾಟನೆ ಆಗುತ್ತಿದೆ
ಅಂದಿನ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ 500 ಎಕರೆ ಜಮೀನು ನೀಡಿದ್ರು
ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ್ ರಾಯರೆಡ್ಡಿ ಕೂಡಾ ಇದು ಧಾರವಾಡಕ್ಕೆ ಬರಲು ಕಾರಣ
ಐಐಟಿ ಇಲ್ಲಿಗೆ ಬರಬೇಕು ಅಂದ್ರೆ ಹಲವು ನಿಯಮಗಳಿದ್ದವು
ರೈಲ್ವೆ ಸೇರಿ ವಿಮಾನ ಹಾಗೂ ಬಸ್ ಸೌಕರ್ಯ ಎಲ್ಲವನ್ನು ನಾವು ತೋರಿಸಿದ್ದೆವು
ಬಿಜೆಪಿಯವರು ಸಹ ನಮ್ಮ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದಾರೆ
ನಾವು ಹಿಂದೆ ಬೇಡಿಕೆ ಇಟ್ಟ ಹಾಗೆ 25% ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು
ಐಐಟಿಗೆ ಜಾಗ ನೀಡಿದ ಮಕ್ಕಳಿಗೆ ಡಿ ದರ್ಜೆ ಕೆಲಸ ನೀಡಬೇಕು
ನಾಳೆ ನಡೆಯುವ ಕಾರ್ಯಕ್ರಮ ವೇಳೆ ಇದನ್ನ ಘೋಷಣೆ ಮಾಡಬೇಕೆಂದು ವಿನಯ್ ಒತ್ತಾಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada