ಕಾಂಗ್ರೆಸ್ ಪಾದಯಾತ್ರೆ ಕಂಡು BJP ನಾಯಕರಿಗೆ ಹೊಟ್ಟೆ ಕಿಚ್ಚು; ಏನೇ ಮಾಡಿದರೂ ನಾವು ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ ಎಂದ ಡಿ.ಕೆ.ಶಿವಕುಮಾರ್

 

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಾಯಾತ್ರೆ ಇಂದು ಕೊನೆಗೊಳ್ಳಲಿದ್ದು, ಇಂದು ನಮ್ಮ ಹೋರಾಟ ಕೇವಲ ಸಾಂಕೇತಿಕವಾಗಿ ಮಾತ್ರ ಅಂತ್ಯವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಾದಯಾತ್ರೆ ಕಂಡು ಹೊಟ್ಟೆ ಕಿಚ್ಚು. ಅಸೂಯೆ, ಹೊಟ್ಟೆಕಿಚ್ಚಿಗೆ ಮದ್ದಿಲ್ಲ. ಯಾರು ಎಷ್ಟೇ ನಮ್ಮ ಹೋರಾಟ ತಡೆಯಲು ಯತ್ನಿಸಿದರೂ ಮುಂದಿಟ್ಟ ಹೆಜ್ಜೆಯನ್ನು ನಾವು ಹಿಂದೆ ಇಡಲ್ಲ. ಮೇಕೆದಾಟು ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತೆ ಎಂದರು.ಇಂದು ಪಾದಯಾತ್ರೆ ಸಾಂಕೇತಿಕವಾಗಿ ಕೊನೆಗೊಳ್ಳಲಿದೆ ಅಷ್ಟೆ. ನಾವು ಜನರ ಹಿತಕ್ಕಾಗಿ, ಕುಡಿಯುವ ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಯೋಜನೆ ಜಾರಿಗೆ ಮುಂದಾಗಲಿ ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಎನ್ನಲ್ಲಿ ಕಂಪನಿಗಾಗಿ ಚೀನಾದೊಂದಿಗೆ, ಭಾರತವು ಉಕ್ರೇನ್ನಲ್ಲಿ ಯಾರೂ ಇಲ್ಲದ ಭೂಮಿಯಲ್ಲಿ ಸಿಲುಕಿಕೊಂಡಿದೆ!

Thu Mar 3 , 2022
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿ ಯುಎನ್‌ಜಿಎ ಬುಧವಾರ ನಿರ್ಣಯವನ್ನು ಅಂಗೀಕರಿಸಿತು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿ ಯುಎನ್‌ಜಿಎ ಬುಧವಾರ ನಿರ್ಣಯವನ್ನು ಅಂಗೀಕರಿಸಿತು. ಒಂದು ವಾರದೊಳಗೆ ಮೂರನೇ ಬಾರಿಗೆ, ಉಕ್ರೇನ್‌ನ ರಷ್ಯಾದ ಆಕ್ರಮಣದ ನಿರ್ಣಯದ ಮೇಲೆ ಭಾರತವು ಮತದಾನದಿಂದ ದೂರವಿದ್ದು, ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಪುನರುಚ್ಚರಿಸಿತು. ಭಾರತವು ಯುಎಸ್ ಮತ್ತು ಅದರ ಬೆಂಬಲಿಗರು ಮತ್ತು ಉಕ್ರೇನ್ ಎರಡರಿಂದಲೂ ಒಂದು ಬದಿಯನ್ನು ಆಯ್ಕೆ […]

Related posts

Advertisement

Wordpress Social Share Plugin powered by Ultimatelysocial