ಗುಜರಾತ್ನಲ್ಲಿ ಬಿಪೊರ್ಜಾಯ್ ಚಂಡಮಾರುತ ಅಪ್ಪಳಿಸಿದ್ದುಅಲ್ಲಿನ ಕಚ್ ಜಿಲ್ಲೆಯ ಜಕಾವು ಬಂದರಿಗೆ ಚಂಡಮಾರುತ ಅಪ್ಪಳಿಸಿದೆ.
ಸುಮಾರು 100 ರಿಂದ 150 ಕಿ. ಮೀಟರ್ ವೇಗದಲ್ಲಿ ಸೈಕ್ಲೋನ್ಗಳು ಅಭ್ಭರಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಗುಜರಾತ್ ತೀರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿವೆ.
ಈಗಾಗಲೇ 1ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 100 ಕಿ .ಮೀ ವೇಗದಲ್ಲಿ ಗಾಳಿ ಬಿಸುತ್ತಿದೆ ಹಲವೆಡೆ ಭಾರಿ ಮಳೆಯಾಗುತ್ತಿವೆ.
ಬಿಪೊರ್ಜಾಯ್ ಚಂಡಮಾರುತ ವಾಯುವ್ಯ ಭಾಗದತ್ತ ಮುನ್ನುಗ್ಗುತ್ತಿದ್ದು,ಗಂಟೆಗೆ 150 ಕಿ. ಮೀ ವೇಗದ ಬಿರುಗಾಳಿಯೊಂದಿಗೆ ಇಂದು ಖಜಾವು ಬಂದರಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತ್ತ ಚಂಡಮಾರುತದ ಹೊಡೆತಕ್ಕೆ ಭೂ ಕುಸಿತದ ಪ್ರಕ್ರಿಯೆ ಗುಜರಾತ್ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಪ್ರಾರಂಭವಾಗಿದ್ದು ,ಮಧ್ಯರಾತ್ರಿಯವರೆಗೆ ಮುಂದು ವರೆಯುವ ನಿರಿಕ್ಷೇಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಚಂಡಮಾರುತ ಅಪ್ಪಳಿಸುತ್ತಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗತ್ತಿದೆ.
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ರವರುʻಎಲ್ಲಾ ಸೇನಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು, ರಕ್ಷಣೆಗೆ ಧಾವಿಸಬೇಕು ʼ ಎಂದು ಮೂರು ರಕ್ಷಣಾ ವಲಯಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.ಇದರ ಬೇನ್ನಲ್ಲೇ ಸೇನೆ ನೌಕಾಪಡೆ ಹಾಗೂ ಬಿಎಪ್ಐ ತಂಡಗಳನ್ನು ನಿಯೋಜಿಸಿದೆ.
18 ಎನ್ಡಿಆರ್ಎಫ್ ತಂಡಗಳು ,12 ಎಸ್ಡಿಆರ್ಎಫ್, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರದ ತಂಡಗಳು,397 ವಿದ್ಯುತ್ ಇಲಾಖೆಯ ತಂಡಗಳನ್ನ ರಕ್ಷಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಹಲವು ಭಾಗಗಳಲ್ಲಿ ಬಿರುಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲಿ ವಿದ್ಯುತ್ ಇಲಾಖೆಯ ತಂಡಗಳು ವಿದ್ಯುತ್ ಮರು ಸಂಪರ್ಕಕ್ಕೆ ಶ್ರಮಿಸುತ್ತಿದೆ. ದೂರವಾಣಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು ರಕ್ಷಣಾ ತಂಡಗಳಗೆ ಮುಂಜಾಗ್ರಾತ ಕ್ರಮವಾಗಿ ಸ್ಯಾಟಲೈಟ್ ಪೋನ್ಗಳನ್ನು ರಕ್ಷಣಾ ತಂಡಗಳಿಗೆ ನೀಡಲಾಗಿದೆ.
https://play.google.com/store/apps/details?id=com.speed.newskannada