ನೀನಾಸಂ ಅಭಿನಯದ ‘ಡಿಯರ್ ವಿಕ್ರಂ’ ಸಿನಿಮಾ ರಿಲೀಸ್ ಆಗಿದೆ

 

ನಟ ನೀನಾಸಂ ಸತೀಶ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನೀನಾಸಂ ಅಭಿನಯದ ‘ಡಿಯರ್ ವಿಕ್ರಂ’ ಸಿನಿಮಾ ರಿಲೀಸ್ ಆಗಿದೆ. ಕೊರೊನಾ ಕಡಿಮೆ ಆದ ಬಳಿಕ ಅವರ ಕೆಲವು ಸಿನಿಮಾಗಳು ಶೂಟಿಂಗ್ ಶುರುವಾಗಿದೆ.

ಈಗ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

ಇದೇ ತಿಂಗಳು ನೀನಾಸಂ ಸತೀಶ್ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ಆಗುತ್ತಿರುವುದೇನೊ ಸರಿ. ಆದರೆ ನೀನಾಸಂ ಸತೀಶ್‌ಗೆ ಏನಾಯ್ತು ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ.

ಹೌದು, ನಟ ನೀನಾಸಂ ಸತೀಶ್ 25 ಸಾವಿರ ರೂಪಾಯಿಗಾಗಿ ಗೋಳಾಡಿದ್ದಾರೆ. ಅದು ತಮ್ಮ ಮಗಳ ಮದುವೆಗಾಗಿ ದುಡ್ಡು ಕೇಳಿದ್ದಾರೆ. ಇದನ್ನು ನೋಡಿ ಅಚ್ಚರಿ ಪಡಬೇಡಿ, ಮುಂದೆ ಓದಿ…

25 ಸಾವಿರಕ್ಕೆ ಗೋಳಾಡಿದ ಸತೀಶ್!
ನಟ ನೀನಾಸಂ ಸತೀಶ್ ತಮ್ಮ ಮಗಳ ಮದುವೆಗಾಗಿ 25 ಸಾವಿರ ದುಡ್ಡು ಕೇಳುತ್ತಾರೆ. ಅಷ್ಟಕ್ಕೂ ಅವರು ತಮ್ಮ ಹೆಸರಿನಲ್ಲಿ ಕರೆ ಮಾಡುವುದಿಲ್ಲ. ಪ್ರೊಡಕ್ಷನ್ ಮ್ಯಾನೇಜರ್ ವೆಂಕಟೇಶ್ ಎಂದು ಕರೆ ಮಾಡುತ್ತಾರೆ. “ಅಣ್ಣ ನಾನು ಪ್ರೊಡಕ್ಷನ್ ಮ್ಯಾನೇಜರ್ ಮಾತಾಡೋದು. ನನ್ನ ಮಗಳ ಮದುವೆ ಅಣ್ಣ 25 ಸಾವಿರ ದೊಡ್ಡು ಬೇಕು ಅಣ್ಣ. ನಿಮ್ಮ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೀನಿ ಅಣ್ಣ. ‘ಕೆಜಿಎಫ್’ ಸಿನಿಮಾಗೂ ಕೆಲಸ ಮಾಡಿದ್ದೇನೆ ಅಣ್ಣ” ಎನ್ನುತ್ತಾರೆ ನೀನಾಸಂ ಸತೀಶ್.

ಅಚ್ಯುತ್ ಕುಮಾರ್ ಬಳಿ ಹಣ ಕೇಳಿದ ಸತೀಶ್!

ಅಷ್ಟಕ್ಕೂ ನಟ ನೀನಾಸಂ ಸತೀಶ್ ಕರೆ ಮಾಡಿದ್ದು ಮತ್ಯಾರಿಗೂ ಅಲ್ಲ. ಹಿರಿಯ ನಟ ಅಚ್ಯುತ್ ಕುಮಾರ್ ಅವರಿಗೆ. ಹಿರಿಯ ನಟ ನೀನಾಸಂ ಸತೀಶ್ ಕರೆ ಮಾಡಿ ಮಗಳ ಮದುವೆಗಾಗಿ ದುಡ್ಡು ಕೊಡಿ ಸರ್ ಎಂದು ಕೇಳಿದ್ದಾರೆ. ಆದರೆ ಅತ್ತ ಅಚ್ಯುತ್ ಕುಮಾರ್, ನೀನು ಯಾರೆಂದು ಗೊತ್ತಿಲ್ಲ. ಯಾರೆಂದು ಗೊತ್ತಾಗುತ್ತಿಲ್ಲ. ಇದ್ದಕ್ಕಿದ್ದ ಹಾಗೆ ಈ ರೀತಿ ಫೋನ್ ಮಾಡಿ ದುಡ್ಡು ಕೇಳಿದರೆ ಕೊಡೋಕಾಗುತ್ತಾ ಎಂದು ರೇಗುತ್ತಾರೆ.

ಇದು ನೀನಾಸಂ ಸತೀಶ್ ಪ್ರಚಾರದ ಗಿಮಿಕ್!

ನಟ ನೀನಾಸಂ ಸತೀಶ್ ಈ ರೀತಿ ಮಾಡಲು ಕಾರಣ ಅವರ ಮಗಳ ಮದುವೆ ಅಲ್ಲ. ಬದಲಿಗೆ ‘ಪೆಟ್ರೋಮ್ಯಾಕ್ಸ್’ ಸಿನಿಮಾದ ಪ್ರಚಾರ. ಹೌದು, ಸಿನಿಮಾ ಪ್ರಚಾರಕ್ಕಾಗಿ ಅಚ್ಯುತ್ ಕುಮಾರ್‌ಗೆ ಕರೆ ಮಾಡಿ ಸತೀಶ್ ಬೇರೆಯವರ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಇದು ಪ್ರ್ಯಾಂಕ್ ಕರೆ ಎಂದು ಅಚ್ಯುತ್ ಕುಮಾರ್‌ಗೆ ಗೊತ್ತಾಗಿಲ್ಲ.

ಜುಲೈ 15ಕ್ಕೆ ‘ಪೆಟ್ರೋಮ್ಯಾಕ್ಸ್’ ರಿಲೀಸ್!

‘ಪೆಟ್ರೋಮ್ಯಾಕ್ಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಜುಲೈ 15 ‘ಪೆಟ್ರೋಮ್ಯಾಕ್ಸ್’ ತೆರೆಗೆ ಬರ್ತಿದೆ. ಹಾಗಾಗಿ ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ವಿಡಿಯೋ ಮಾಡಿದ್ದಾರೆ ನೀನಾಸಂ ಸತೀಶ್. ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ಜೊತೆಗೆ ಮೇಘನಾ ರಾಜ್ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀರೊಯಿನ್ ಆಗಿ ಪವಿತ್ರಾ ಲೋಕೇಶ್ ಮಿಂಚಲಿಲ್ಲ.

Tue Jul 5 , 2022
  ಕನ್ನಡ‌ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೈಸೂರ್ ಲೋಕೇಶ್ ಎಲ್ಲರಿಗೂ ಚಿರಪರಿಚಿತ. ಇವರ ಮಗಳೇ ಪವಿತ್ರಾ ಲೋಕೇಶ್. ಹೌದು, ಪವಿತ್ರಾ ಲೋಕೇಶ್ ಸ್ಫೂರದ್ರೂಪಿ ಸುಂದರಿಯಾಗಿದ್ದರು. ನೋಡಲು ಅಪ್ಸರೆಯಂತೆ ಇದ್ದರು. ಆದರೂ ಕೂಡ ಹೀರೊಯಿನ್ ಆಗಿ ಪವಿತ್ರಾ ಲೋಕೇಶ್ ಮಿಂಚಲಿಲ್ಲ. ಅದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು.‌ ನಟಿ ಪವಿತ್ರಾ ಲೋಕೇಶ್ ಅವರು ಸಿನಿಮಾರಂಗಕ್ಕೆ ಬರುವ ಮುನ್ನವೇ ಅವರ ತಂದೆಯವರು ಸಾವನ್ನಪ್ಪಿದ್ದರು. ಅಂದಿನ ಕಷ್ಟದ ದಿನಗಳಲ್ಲಿಯೇ ತಮ್ಮ […]

Advertisement

Wordpress Social Share Plugin powered by Ultimatelysocial