ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ಸ್ಟಾರ್ ನಟಿಯೇ ಕಾರಣ

 

ಕಾಲಿವುಡ್ ಟು ಹಾಲಿವುಡ್ ಅಂಗಳದವರೆಗೂ ಸೌಂಡ್ ಮಾಡುತ್ತಿರುವ ಧನುಷ್ ಸದ್ಯ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ಸ್ಟಾರ್ ನಟಿಯೇ ಕಾರಣ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ.

ಸದ್ಯ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬ್ಯುಸಿಯಿರುವ ಧನುಷ್, ಇತ್ತೀಚೆಗಷ್ಟೇ ಐಶ್ವರ್ಯ ರಜನೀಕಾಂತ್ ಜತೆಗಿನ 19 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಈವರೆಗೂ ಈ ಜೋಡಿ ಯಾವ ಕಾರಣಕ್ಕೆ ಬೇರೆ ಬೇರೆಯಾಗಿದ್ದಾರೆ ಎಂಬುದೇ ತಿಳಿದು ಬಂದಿಲ್ಲ. ಇಬ್ಬರು ದೂರ ದೂರ ಆಗಿರುವ ಈ ಮಾಜಿ ಜೋಡಿ ಸದ್ಯ ತಮ್ಮ ತಮ್ಮ ವೃತ್ತಿ ಬದುಕಿನತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಧನುಷ್ ಮತ್ತು ರಜನಿಕಾಂತ್ ಪುತ್ರಿಯ ಡಿವೋರ್ಸ್‌ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾರಣ ಅಂತಾ ಸಖತ್ ಚರ್ಚೆ ಆಗುತ್ತಿದೆ

ಬಾಲಿವುಡ್‌ನ `ಅತ್ರಂಗಿರೆ’ ಚಿತ್ರದಲ್ಲಿ ಸಾರಾ ಮತ್ತು ಅಕ್ಷಯ್ ಕುಮಾರ್ ಜತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಧನುಷ್ ಮತ್ತು ಸಾರಾಗೆ ಗೆಳೆತನ ಶುರುವಾಗಿತ್ತು. ಇದೀಗ ಇವರಿಬ್ಬರ ಓಡಾಟ, ಪಾರ್ಟಿ ಜೋರಾಗಿದೆಯಂತೆ. ಐಶ್ವರ್ಯ ಮತ್ತು ಧನುಷ್ ಬೇರೆಯಾಗಲು ಸಾರಾ ಅಲಿ ಖಾನ್ ಅವರೇ ಕಾರಣ ಅಂತಾ ಬೆರಳು ಮಾಡಿ ತೋರಿಸುತ್ತಿದ್ದಾರೆ. ಧನುಷ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿಜವಾಗಲೂ ಸಾರಾನೇ ಕಾರಣನಾ ಅಥವಾ ಇದೊಂದು ವದಂತಿ ಅಷ್ಟೇನಾ. ಮುಂದಿನ ದಿನಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ ಅಂತಾ ಧನುಷ್ ಮತ್ತು ಸಾರಾ ಮೌನ ಮುರಿಯುವವರೆಗೂ ಕಾದುನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಮಾಕ್ಷಿಪಾಳ್ಯ ಪೊಲೀಸರಿಂದ ಕನ್ನಾ ಕಳವು ಮಾಡ್ತಿದ್ದ ಆರೋಪಿಯ ಬಂಧನ

Thu Jul 28 , 2022
ನವಾಜ್ ಶರೀಫ್ ಬಂಧಿತ ಆರೋಪಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಹಗಲು, ರಾತ್ರಿ ಕನ್ನಾ ಕಳವು ಮಾಡ್ತಿದ್ದ ಆರೋಪಿ ಬಂಧಿತನಿಂದ 5 ಲಕ್ಷದ 10 ಸಾವಿರ ಮೌಲ್ಯದ 102ಗ್ರಾಂ ಚಿನ್ನಾಭರಣ, 1 ಲಕ್ಷದ 50 ಸಾವಿರ ನಗದು ಜಪ್ತಿ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿರೋ ಪೊಲೀಸರು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial