ನಮ್ಮ ಪಕ್ಷಕ್ಕೆ ಸೇರುತ್ತಿರುವುದು ಅಭಿನಂದನೆ; ಡಿ.ಕೆ ಶಿವಕುಮಾರ್‌

ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಡಿ.ಎಂ.ವಿಶ್ವನಾಥ್ ಹಾಗೂ ಮಂಡ್ಯದ ಜೆಡಿಎಸ್ ಮುಖಂಡ ಬಾಲಕೃಷ್ಣ ಅವರು ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದಾರೆ.ಈ ವೇಳೆ ಡಿ.ಕೆ ಶಿವಕುಮಾರ್‌ ಅವರಿಬ್ಬರನ್ನೂ ಸ್ವಾಗತಿಸಿದರು.ಈ ಹಿಂದೆ 2008ರಲ್ಲಿ ಜೆಡಿಎಸ್‌ ನಿಂದ ವಿಶ್ವನಾಥ್ ಅವರು ಡಿ.ಕೆ ಶಿವಕುಮಾರ್‌ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಅವರು ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದಾರೆ.ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿ ಕೇವಲ 7 ಸಾವಿರ ಅಂತರದಿಂದ ಸೋಲು ಅನುಭಸಿದ್ದರು. ವಿಶ್ವನಾಥ್ ತಂದೆ, ಅವರ ತಾತ ನನ್ನ ಪರ ಚುನಾವಣೆ ಪ್ರಚಾರ ಮಾಡಿದ್ದಾರೆ. ಆದರೆ ಜೆಡಿಎಸ್​ನಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಹೋಗಿದ್ದರು. ಆದರೆ ಈ ರಾಜ್ಯ, ನಮ್ಮ ಜಿಲ್ಲೆ ಹಾಗೂ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರಿದ್ದಾರೆ ಎಂದರು.ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಪಕ್ಷಕ್ಕೆ ಸೇರುತ್ತಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವೂ ಹಾಗೂ ಸಿದ್ದರಾಮಯ್ಯನವರು ಪಕ್ಷ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜೊತೆ ನಾವೂ ಕೂಡ ಬರುತ್ತೇವೆ ಅಂತಾ ರಾಧಾಕೃಷ್ಣರವರು ಕೂಡ ಬಂದಿದ್ದಾರೆ. ಇವರಿಬ್ಬರಿಗೂ ಕಾಂಗ್ರೆಸ್ ಭಾವುಟ ಕೊಡುತ್ತೇನೆ, ಶಾಲು, ಹೂವಿನ ಹಾರ ಹಾಕುತ್ತೇನೆ. ಇವರ ಜೊತೆ ಸಾವಿರಾರು ಜನ ಬಂದಿದ್ದಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿರಾಟ್ ಕೊಹ್ಲಿ ಬಳಸುವ ಬ್ಯಾಟ್‌ ಬೆಲೆ ಎಷ್ಟು ಸಾವಿರ ಗೊತ್ತಾ?

Mon Jan 9 , 2023
ಟೀಂ ಇಂಡಿಯಾ ಈಗ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಜನವರಿ 10 ರಂದು ಗುವಾಹಟಿಯಲ್ಲಿ ನಡೆಯಲಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಭಾಗವಾಗದ ಹಲವು ಹಿರಿಯ ಆಟಗಾರರು ತಂಡಕ್ಕೆ ಮರಳಲಿದ್ದಾರೆ.ಇವರಲ್ಲಿ ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ವಿರಾಟ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು, ನಂತರ ವಿಶ್ರಾಂತಿ ಪಡೆದಿದ್ದರು, ಈಗ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.ಗುವಾಹಟಿ ತಲುಪಿದ ವಿರಾಟ್ಶ್ರೀಲಂಕಾ ವಿರುದ್ಧದ […]

Advertisement

Wordpress Social Share Plugin powered by Ultimatelysocial