ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಉತ್ತರ ಕರ್ನಾಟಕದ ಪ್ರಸಿದ್ಧಿ ಪಡೆದಿರುವ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿನ ಹಣ ಹಾಗೂ ದೇವತೆಯ ಆಭರಣಗಳನ್ನು ದುಷ್ಕರ್ಮಿಗಳು ತಡರಾತ್ರಿ ಕಳ್ಳತನವಾಗಿದೆ.
ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯಲ್ಲಿರುವ ಭಾಗ್ಯವಂತಿ ದೇವಸ್ಥಾನದ ಚಿಕ್ಕ ಬಾಗಿಲನ್ನು ಮುರಿದು ದುರ್ಷರ್ಮಿಗಳು ಗರ್ಭಗುಡಿಯ ಒಳಗೆ ಹೋಗಿದ್ದಾರೆ.
ಬಳಿಕ ಹುಂಡಿಯನ್ನ ಹೊಡೆದು ಅದರಲ್ಲಿನ ಹಾಗೂ ದೇವತೆಯ ಆಭರಣಗಳನ್ನ ಕಳ್ಳತನ ಮಾಡಿ ಚಿಲ್ಲರೆ ಹಣವನ್ನು ತಿಪ್ಪೇಯಲ್ಲಿ ಎಸೆದು ಹೋಗಿದ್ದಾರೆ.
ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು ಸ್ವಾನ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಹಾಗೂ ಕಳ್ಳತನವಾದ ಹಣ, ಆಭರಣದ ಮಾಹಿತಿಯನ್ನ ಪೊಲೀಸರು ಕಲೆ ಹಾಕ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…