ಪ್ರತಿಯೊಬ್ಬರೂ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.ಕಣ್ಣುಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಚ್ ಕೆ ಇ ಸಂಸ್ಥೆ ನಿರ್ದೇಶಕ ಹಾಗೂ ಮಾಜಿ ಜಿ ಪಂ ಸದಸ್ಯ ಅರುಣಕುಮಾರ ಎಂ ಪಾಟೀಲ ಹೇಳಿದರು ಅವರು ತಾಲೂಕಿನ ಮಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಚ್ ಕೆ ಇ ಎಸ್ ಬಸವೇಶ್ವರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ ಜೀವನ ಬೆಳಗಲು ಕಣ್ಣು ಬಹಳ ಅವಶ್ಯಕವಾಗಿದೆ ಅದರ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯ ಎಷ್ಟೇ ಸಮರ್ಥನಿದ್ದರೂ ದೃಷ್ಟಿ ಇಲ್ಲದಿದ್ದರೆ ಇತರರಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರುಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಆರತಿ ಜನ್ನಾ ಮಹಾದೇವಪ್ಪ ಕರೂಟಿ ಅಭಿಷೇಕ ಪಾಟೀಲ ಶಿವಾನಂದ ಗಾಡಿ ಸಾಹುಕಾರ ಸಿದ್ರಾಮಪ್ಪ ಹಿರೇಕುರುಬರ ಗ್ರಾ ಪಂ ಸದಸ್ಯ ಬಸವರಾಜ ವಾಯಿ ವಿ ಎಸ್ ಎಸ್ ಎನ್ ಅಧ್ಯಕ್ಷ ಮಹಾಂತೇಶ ಕರೂಟಿ ಉಪಾಧ್ಯಕ್ಷ ಚಂದು ಹಿರೇಕುರುಬರ ಸಿದ್ದಪ್ಪ ಹತ್ತರಕಿ ಕಲ್ಲಪ್ಪ ಅಲ್ಲಾಪೂರ ಮಹಾದೇವ ಪ್ಯಾಟಿ ವೇಣುಮಾಧವ ಅವಧಾನಿ ಶರಣಪ್ಪ ನಾವದಗಿ ಸಂತೋಷ ರೂಪನೂರ ರಾಜಶೇಖರ ಪ್ಯಾಟಿ ಸಂತೋಷ ಅಲ್ಲಾಪೂರ ಗುಳುರಾಯ ಬುರುಡ ಮಹಿಬೂಬ ಗೌರ ಸಿದ್ದಪ್ಪ ಹುಂಡೇಕಾರ ಶ್ರೀಕಾಂತ ನಿವರಗಿ ಶೇಖರ ಶೆಟ್ಟಿ ಸುರೇಶ ಮುಜಗೊಂಡ ಜಗದೀಶ ದೇಶಟ್ಟಿ ಮಾಕರ್ಂಡೇಯ ಕರೂಟಿ ಗಡ್ಡೆಪ್ಪ ಬಸ್ಸಿನಕರ ಇರ್ಫಾನ ಜಮಾದಾರ ಮಲ್ಲಪ್ಪ ಹಿಟ್ಟಿನ ಡಾ ಶುಭಂ ಡಾ ಶ್ರಾವಣಿ ಡಾ ಶಿವಾನಿ ಡಾ ಸುರೇಶ ಬಸವೇಶ್ವರ ಆಸ್ಪತ್ರೆ ಟಿಆರ್ ಒ ಸತೀಶ ಇತರರಿದ್ದರು.
ಈ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ 150 ಜನರನ್ನು ಪರಿಕ್ಷಿಸಲಾಯಿತು ಪರಿಕ್ಷಿಸಲಾಯಿತು.40 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada