ಕನ್ನಡಕ್ಕಾಗಿ ದ್ವೇಷ ಮರೆತ ಅಪ್ಪು, ಕಿಚ್ಚ, ಯಶ್ ಫ್ಯಾನ್ಸ್:

‘ರಾಜಕುಮಾರ’ ಚಿತ್ರದ ಅಪ್ಪು ಡ್ಯಾನ್ಸ್ ಡ್ಯಾನ್ಸ್ ಹಾಡಿನಲ್ಲಿ “ಫಸ್ಟ್ ಡೇ ಫಸ್ಟ್ ಶೋ ಕನ್ನಡ ಸಿನಿಮಾ ನೋಡಿ, ಸ್ಟಾರ್ ವಾರ್ ಯಾಕೆ ಎಲ್ಲ ಒಂದೆ ಇಲ್ಲಿ” ಎನ್ನುವ ಸಾಲಿದೆ. ಆ ಸಾಲಿಗೆ ತಕ್ಕಂತೆ ‘ಕ್ರಾಂತಿ’ ಚಿತ್ರಕ್ಕಾಗಿ ಬೇರೆ ನಟರ ಫ್ಯಾನ್ಸ್ ಕೂಡ ಒಂದಾಗಿದ್ದಾರೆ.

ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ.

‘ಕ್ರಾಂತಿ’ ಸಿನಿಮಾ ಬುಕ್ಕಿಂಗ್ ಜೋರಾಗಿದೆ. ಅಭಿಮಾನಿಗಳು ಫಸ್ಟ್ ಡೇ ಟಿಕೆಟ್ಸ್‌ಗಾಗಿ ಮುಗಿಬಿದ್ದಿದ್ದಾರೆ. ‘ಕ್ರಾಂತಿ’ ಸಿನಿಮಾಗೆ ಬಾಲಿವುಡ್‌ನ ‘ಪಠಾಣ್’ ಸಿನಿಮಾ ಭಾರೀ ಪೈಪೋಟಿ ಕೊಡಲಿದೆ. ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಈ ವಾರ ಎರಡೂ ಸಿನಿಮಾಗಳ ಮಧ್ಯೆ ಭಾರೀ ಫೈಟ್ ಏರ್ಪಡಲಿದೆ. ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್‌ನಲ್ಲಿ ತೊಡಗಿದ್ದವರು ಈಗ ‘ಕ್ರಾಂತಿ’ ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಕನ್ನಡ ಸಿನಿಮಾ ಗೆಲ್ಲಬೇಕು ಎನ್ನುತ್ತಿದ್ದಾರೆ. ‘ಕ್ರಾಂತಿ’ ಶತ ದಿನೋತ್ಸವ ಆಚರಿಸಲಿ ಎಂದು ಹಾರೈಸುತ್ತಿದ್ದಾರೆ.

ಕೆಲ ಕಾರಣಗಳಿಂದ ನಟ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಭಾರೀ ಫ್ಯಾನ್ಸ್ ವಾರ್ ನಡೀತಿತ್ತು. ಹೊಸಪೇಟೆ ಘಟನೆ ನಂತರ ಅದು ಮತ್ತೊಂದು ಹಂತಕ್ಕೆ ಹೋಗಿತ್ತು. ‘ಕ್ರಾಂತಿ’ ಸಿನಿಮಾ ಬಗ್ಗೆ ಸೋಶಿಯಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕ್ರಾಂತಿ’ ಚಿತ್ರಕ್ಕೆ ಅಪ್ಪು ಫ್ಯಾನ್ಸ್ ಕೂಡ ಬೆಂಬಲ ಸೂಚಿಸಿದ್ದಾರೆ. ಯಾವುದೋ ಬೇಸರದಿಂದ ಇಷ್ಟು ದಿನ ಟ್ರೋಲ್ ಮಾಡುತ್ತಿದ್ದೆವು. ಆದರೆ ಸಿನಿಮಾ ಬರ್ತಿದೆ. ಕನ್ನಡ ಸಿನಿಮಾ. ಅದಕ್ಕೆ ಒಳ್ಳೆದಾಗಲಿ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಇನ್ನು ಕೂಡ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ. ಗೋಕಾಕ್‌ನಲ್ಲಿ ಕೆಲ ಅಪ್ಪು ಫ್ಯಾನ್ಸ್ ‘ಕ್ರಾಂತಿ’ ಚಿತ್ರಕ್ಕೆ ಶುಭ ಹಾರೈಸಿ ಬ್ಯಾನರ್‌ಗಳನ್ನು ಕಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನೇನು ಓಡಿಹೋಗಿ ಮದುವೆಯಾಗಲ್ಲ;

Tue Jan 24 , 2023
ಕಳೆದ ವಾರ ನಟಿ ಪ್ರೇಮ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಉಡುಪಿಯ ಕಾಪುವಿನಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ನಟಿ ಪ್ರೇಮ ಭೇಟಿ ನೀಡಿದ್ದರು. ಎರಡನೇ ಮದುವೆಯ ಕುರಿತಾಗಿ ದೇವರ ಬಳಿ ಕೇಳಲು ಪ್ರೇಮ ಅಲ್ಲಿಗೆ ತೆರಳಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇನ್ನು ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯಿಸದೇ ಇದ್ದ ನಟಿ ಪ್ರೇಮ ಈಗ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಅಂದು ತಾನು ಕೊರಗಜ್ಜ ದೇವಸ್ಥಾನಕ್ಕೆ ಭೇಟಿ […]

Advertisement

Wordpress Social Share Plugin powered by Ultimatelysocial