ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ರದ್ದುಪಡಿಸಿ ಎಂದು ರೈತರಿಂದ ಪ್ರತಿಭಟನೆ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮದಲ್ಲಿ ಹೊಸದಾಗಿ ರಚಿಸಿರುವ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ರದ್ದುಪಡಿಸಬೇಕೆಂದು ರೈತರು ಇಲಾಖೆ ಮುಂದೆ ಪ್ರತಿಭಟನೆ ಮಾಡಿದರು.ಅಧಿಕಾರಿಗಳ ಮುಂದೆ ರೈತರು ಮಾತನಾಡಿದರು ಸೋಮನಮರಡಿಯಲ್ಲಿ ಸಹಕಾರ ಸಂಘ ರಚಿಸುವಾಗ ಸಹಕಾರ ಇಲಾಖೆಯಿಂದ ರೈತರಿಗೆ ಯಾವುದೇ ರೀತಿಯ ಮಾಹಿತಿ ಕೊಟ್ಟಿಲ್ಲ ಶೇರುಗಳನ್ನು ಸಾರ್ವಜನಿಕರಿಂದ ರೈತರಿಂದ ಸಂಗ್ರಹ ಮಾಡಿಲ್ಲ ತಾವೇ ಇಬ್ಬರು ಮೂರು ಜನ ತಾವೇ ಬೇರೆಯವರ ಹೆಸರಿನಲ್ಲಿ ಸಂಗ್ರಹ ಮಾಡಿ ಸಹಕಾರ ಇಲಾಖೆಗೆ ಕಾನೂನುಗಳನ್ನು ಪಾಲಿಸದೆ.ಸಹಕಾರ ಇಲಾಖೆಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಆಡಳಿತ ಮಂಡಳಿ ಮಾಡಿ ಸಾರ್ವಜನಿಕರಿಗೆ ರೈತರಿಗೆ ಮೋಸ ಮಾಡಿದ್ದಾರೆ ಸಿಬ್ಬಂದಿಯ ಇಲಾಖೆಯ ಗಮನಕ್ಕೆ ತರದೆ ಏಕವ್ಯಕ್ತಿ ತೀರ್ಮಾನ ಮಾಡಿ ರಚಿಸಿದ್ದಾರೆ ಎಂದು ಸಾರ್ವಜನಿಕರು ರೈತರು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು .ಸಹಕಾರ ಇಲಾಖೆ ಗಮನಕ್ಕೆ ಇಲ್ಲದೆ ರಚಿಸಿರುವ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಪುನ ರೈತರಿಂದ ಷೇರು ಸಂಗ್ರಹ ಮಾಡಿ ಪಾರದರ್ಶಕವಾಗಿ ಆಡಳಿತ ಮಂಡಳಿ ರಚಿಸಬೇಕು ಒಂದು ನೀವು ನಿರ್ಲಕ್ಷ್ಯ ಮಾಡಿದರೆ ನಾವು ಎಲ್ಲರೂ ಸೇರಿ ರಸ್ತೆ ತಡೆ ಮಾಡುತ್ತೇವೆ ಎಂದು ರೈತರು ಆಗ್ರಹಿಸಿದ್ದರು.

ಇದನ್ನು ಓದಿ:ಛತ್ತೀಸ್ ಗಢದಲ್ಲಿ ನಕ್ಸಲರಿಂದ ಐಇಡಿ ದಾಳಿ

 

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ

Tue Dec 1 , 2020
ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.. ಬೆಂಗಳೂರಿನ ಬಿ. ನಾರಾಯಣಪುರ ಮೂಲದ ಕಾರ್ತಿಕ್ ಹಾಗೂ ಹರಿಪ್ರಸಾದ್ ಮೃತ ದುರ್ದೈವಿಗಳಾಗಿದ್ದು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.. ಇದನ್ನು ಓದಿ:ಸಿಪಿ ಯೋಗೀಶ್ವರ್ ಮಂತ್ರಿ ಮಾಡೋದು ಗ್ಯಾರಂಟಿ Please follow and like us:

Advertisement

Wordpress Social Share Plugin powered by Ultimatelysocial