ನಕಲಿ ರಸಗೊಬ್ಬರ ಮಾರಾಟ : ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹ

ಸುರಪುರ ತಾಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ ನಕಲಿ ರಸಗೊಬ್ಬರ ಮಾಡುತ್ತಿರುವದನ್ನು ಖಂಡಿಸಿ ಕ.ರ.ವೇ ಗ್ರಾಮ ಘಟಕದ ವತಿಯಿಂದ ರಸಗೊಬ್ಬರ ಮಳಿಗೆಯ ಮುಂದೆ ಪ್ರತಿಭಟನೆ ನಡೆಸಿದರು.

ಮಾಚಗುಂಡಾಳ ಗ್ರಾಮದ ರೈತ ಶಿವಪ್ಪ ನಾಗನಟಿಗಿ ಎಂಬುವರು ಕಳೆದ ಮೂರು ದಿನಗಳ ಹಿಂದೆ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ 10- 26 -26 ಹಾಗೂ 17 -17 – 17 ರಸ ಗೊಬ್ಬರವನ್ನು ಪ್ರತಿ ಚೀಲಕ್ಕೆ 1450 ರೂ.ಗಳಂತೆ ಸುಮಾರು 10 ಕ್ಕೂ ಹೆಚ್ಚು ಚೀಲಗಳನ್ನು ಖರೀದಿಸಿದ್ದರು .

ಖರೀದಿಸಿದ ನಂತರ ರೈತ ಜಮೀನಿನಲ್ಲಿ ಹತ್ತಿ ಬೆಳೆಗೆ ಗೊಬ್ಬರ ಬಿತ್ತಲು ಹೋದಾಗ ಗೊಬ್ಬರದಲ್ಲಿ ಮರಳು ಮತ್ತು ಮಣ್ಣು ಮಿಶ್ರಿತ ನಕಲಿ ಗೊಬ್ಬರ ಇರುವುದು ಕಂಡು ಬಂದಿದೆ .

ಕೂಡಲೇ ಆತಂಕಗೊಂಡು ರೈತ ಕ.ರ.ವೇ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ರವರನ್ನು ಸಂಪರ್ಕಿಸಿದ್ರು, ಕೂಡಲೇ ರೈತನೊಡನೆ ಗೊಬ್ಬರ ಚೀಲದೊಂದಿಗೆ ಸುರಪೂರದ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ .

ಅಧಿಕಾರಿಗಳು ಪರಿಶೀಲಿಸಿದಾಗ ರಸಗೊಬ್ಬರ ನಕಲಿ ಇರುವದು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಇಂದು ಬೆಳಿಗ್ಗೆ ಸುರಪೂರ ಪೋಲಿಸ್ ಇನ್ಸಪೆಕ್ಟರ್ ಸುನಿಲ್ ಮೂಲಿಮನಿ .ಹಾಗೂ ಕೃಷಿ ಅಧಿಕಾರಿ ಗುರುನಾಥ ಹಾಗೂ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಭೇಟಿ ನೀಡಿ ಅಂಗಡಿಯನ್ನು ಸಿಜ್ ಮಾಡಿರುತ್ತಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರ : ಶಿಗ್ಲಿ ಗ್ರಾಮದಲ್ಲಿ ಜಿಲ್ಲೆಯ ಅತಿ ದೊಡ್ಡ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ

Wed Jul 27 , 2022
ಜಿಲ್ಲೆಯಲ್ಲಿ ಅತಿ ದೊಡ್ಡ ವಸತಿ ನಿಲಯ ಇದಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು ಅವರು ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ವನ್ನು ಉದ್ಘಾಟನೆ ಮಾಡಿ ಮಾತನಾಡುತ್ತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿ ಹೆಸರು ಮಾಡಿರುವ ಶಿಗ್ಲಿ ಯಲ್ಲಿ ವಸತಿ ನಿಲಯಗಳು ಅವಶ್ಯಕತೆ ಇತ್ತು ನಿರ್ಮಾಣವಾದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ […]

Advertisement

Wordpress Social Share Plugin powered by Ultimatelysocial