ಫುಡ್​ ಡೆಲಿವರಿ ಮಾಡುವುದು ತಡವಾಗ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಫುಡ್​ ಡೆಲಿವರಿ ಮಾಡುವುದು ತಡವಾಗ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಬೆಂಗಳೂರು: ಫುಡ್​ ಡೆಲಿವರಿ ಮಾಡುವುದು ತಡವಾಗುತ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬುವ ಮೂಲಕ ಮಹಿಳೆಯೊಬ್ಬಳು ದಬ್ಬಾಳಿಕೆ ನಡೆಸಿರುವ ಘಟನೆ ನಗರದ ವೈಟ್​ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್​ನಲ್ಲಿ ನಿನ್ನೆ (ಡಿ.23) ನಡೆದಿದೆ.

ಸಂಜಯ್ ಹೆಸರಿನ ಡೆಲಿವರಿ ಬಾಯ್ ಫುಡ್ ಪ್ಯಾಕೇಟ್ ಪಡೆಯಲು ಲಿಯಾನ್ ಗ್ರಿಲ್ ರೆಸ್ಟೋರೆಂಟ್​ಗೆ ಬಂದಿದ್ದ. ಈ ವೇಳೆ ಪುಡ್ ಪ್ಯಾಕೆಟ್ ಕೊಡಲು ತಡಮಾಡಿದ್ದಕ್ಕೆ ಆತ ಪ್ರಶ್ನಿಸಿದ್ದಾನೆ. ನೀವು ಈ ರೀತಿ ತಡಮಾಡಿದರೆ, ಗ್ರಾಹಕರಿಗೆ ತಲುಪಿಸುವುದು ಕೂಡ ವಿಳಂಬವಾಗುತ್ತಿದೆ ಎಂದಿದ್ದ. ಇದರಿಂದ ಸಿಟ್ಟಾದ ಮಹಿಳಾ ಸಿಬ್ಬಂದಿ ಆತನ ಮೇಲೆ ದಬ್ಬಾಳಿಕೆ ನಡೆಸಿದ್ದಾಳೆ. ಪರಸ್ಪರ ಮಾತಿಗೆ ಮಾತು ಬೆಳೆದು ಡೆಲಿವರಿ ಬಾಯ್​ನ‌ ಕುತ್ತಿಗೆ ಪಟ್ಟಿ ಹಿಡಿದ ಮಹಿಳೆ ಆತನನ್ನು ಎಳೆದೊಯ್ದ ರೆಸ್ಟೋರೆಂಟ್​ನಿಂದ ಹೊರದಬ್ಬಿದ್ದಾಳೆ.

ಘಟನೆ ಬಳಿಕ ಸಂಜಯ್​ ಬೆನ್ನಿಗೆ ನಿಂತ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮಾಲೀಕರನ್ನ‌ ಸಂಪರ್ಕಿಸಿವೆ. ಮ್ಯಾನೇಜರ್ ಪ್ರಶಾಂತ್ ಎಂಬುವರನ್ನು ಭೇಟಿಯಾಗಿ‌ ಮಹಿಳೆಯನ್ನು ವಜಾಗೊಳಿಸಲು ಆಗ್ರಹಿಸಿವೆ. ಮಹಿಳೆಯ ಕೃತ್ಯ ಗಮನಿಸಿದ ಮ್ಯಾನೇಜರ್​ ಮಹಿಳೆಯನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲದೆ, ಡೆಲಿವರಿ‌ ಬಾಯ್​ಗೆ ಒಂದು ದಿನದ ಸಂಬಳ‌ವನ್ನು ಸಂಘಟನೆಗಳು ಕೊಡಿಸಿವೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ: ಇಬ್ರಾಹಿಂ

Fri Dec 24 , 2021
ಬೆಳಗಾವಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ ಎಂದು ಹೇಳಿದ್ದೇನೆ. ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲ್ನೋಟಕ್ಕೆ ಎರಡು ಮೂರು ಹೆಸರು ಕೇಳಿ ಬರುತ್ತಿವೆ. ಬೊಮ್ಮಾಯಿ ಅವರ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಕುಂಟುವಂತಾಗಿದೆ. ಮುಂಬಯಿಗೆ 12 ಜನರನ್ನು ಕರೆದುಕೊಂಡು ಹೋಗಿ ವೀಡಿಯೋ ಮಾಡಿಕೊಂಡು ಕೋರ್ಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial