ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಆಗಮಿಸಿದ ಮಾಜಿ ಶಾಸಕ SI ಚಿಕ್ಕನಗೌಡ. ಹುಬ್ಬಳ್ಳಿಯ ಕೇಶ್ವಾಪೂರದ ಮಧುರಾ ಕಾಲೋನಿಯ ಶೆಟ್ಟರ್ ನಿವಾಸಕ್ಕೆ ಚಿಕ್ಕನಗೌಡ ಆಗಮನ..! SI ಚಿಕ್ಕನಗೌಡ ಕುಂದಗೋಳ ಮಾಜಿ ಶಾಸಕ. ಟಿಕೆಟ್ ಸಿಗದೇ ಇರೋದಕ್ಕೆ ಬಿಜೆಪಿಗೆ ರಾಜೀನಾಮೆ ಕೊಟ್ಟಿರೋ ಚಿಕ್ಕನಗೌಡ. ಶೆಟ್ಟರ್ ಭೇಟಿಗೆ ಬಂದ ಚಿಕ್ಕನಗೌಡ..! ಶೆಟ್ಟರ್ ರನ್ನ ನಡೆಸಿಕೊಂಡ ರೀತಿಗೆ ಚಿಕ್ಕನಗೌಡ ಅಸಮಾಧಾನ! ಶೆಟ್ಟರ್ ಸ್ಥಿತಿಯೇ ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಎಂದ ಚಿಕ್ಕನಗೌಡರ, ಶೆಟ್ಟರ್ ಮೂವತ್ತು ವರ್ಷಗಳ ಕಾಲ ಪಕ್ಷ ಕಟ್ಟಿದ್ದಾರೆ.
ಅವರಿಗೆ ಈ ರೀತಿ ಅಗಿರೋದು ನನಗೆ ನೋವಾಗಿದೆ ಎಂದ ಚಿಕ್ಕನಗೌಡರ, ಅವರು ರಾಜೀನಾಮೆ ಕೊಡುತ್ತಿರುವುದು ಕೇಳಿ ನನಗೆ ತುಂಬಾ ನೋವಾಗುತ್ತಿದೆ, ಟಿಕೆಟ್ ನೀಡುವಂತ ಭರವಸೆ ನನಗೂ ಕೊಟ್ಟಿದ್ದರು. ಒಬ್ಬ ಪ್ರಭಾವಿ ನಾಯಕನನ್ನ ಈ ಪರಿಸ್ಥಿತಿಗೆ ತಂದಿರುವುದು ತುಂಬಾ ನೋವು ತಂದಿದೆ. ನಾನು ಸ್ಪರ್ಧೆ ಮಾಡೋದು ಶತಸಿದ್ದ ಎಂದ ಚಿಕ್ಕನಗೌಡರ, ಕಾಂಗ್ರೆಸ್,ಜೆಡಿಎಸ್ ಕೆಆರ್.ಪಿಪಿ ನಾಯಕರು ಸಂಪರ್ಕ ದಲ್ಲಿದಾರೆ.
https://play.google.com/store/apps/details?id=com.speed.newskannada