ಗಂಧರ್ವರಿಗೂ ಕೌರವರಿಗೂ ಯುದ್ಧ. ದುರ್ಯೋಧನನ ಅಪಹರಣ.
ಯುದ್ಧ ಆರಂಭವಾಯಿತು. ಕರ್ಣ ಮುಂತಾದವರು ಮುನ್ನುಗ್ಗಿ ಗಂಧರ್ವರ ಪರಿವಾರವನ್ನು ಬಡಿದರು. ಒಂದು ಬಾರಿ ಅವರು ಗೆಲುವರು. ಮತ್ತೆ ಬಲಸಹಿತ ಬಂದು ಗಂಧರ್ವರು ಮುನ್ನುಗ್ಗುವರು. ಹೀಗೆಯೇ ಆಯಿತು. ಕೊನೆಯಲ್ಲಿ ಗಂದರ್ವರ ನಾಯಕ ಚಿತ್ರಸೇನನು ಬಹು ದೊಡ್ಡ ಸೈನ್ಯದೊಂದಿಗೆ ಬಂದನು.
ಕರ್ಣನು ಶೌರ್ಯದಿಂದ ಅವನನ್ನು ಎದುರಿಸಿದನು. ಇಡೀ ದೇವಸೈನ್ಯ ಗಂದರ್ವರ ಪರವಾಗಿ ನಿಂತಿತು. ಕರ್ಣನ ಅಟಾಟೋಪ ನಡೆಯಲಿಲ್ಲ. ಇತರ ನಾಯಕರುಗಳೂ ಒಬ್ಬೊಬ್ಬರಾಗಿ ಸೋಲುತ್ತ ಬಂದರು. ಶಸ್ತ್ರಾಸ್ತ್ರಗಳ ಪೈಪೋಟಿ ನಡೆಯಿತು. ಆಗ್ನೇಯಕ್ಕೆ ವರುಣ, ಸರ್ಪಕ್ಕೆ ಗರುಡ ಹೀಗೆ.
ಪಾಂಡವರು ತಮ್ಮ ಸ್ಥಳದಿಂದ ನಿಂತು ನೋಡುತ್ತಿದ್ದರು. ಕರ್ಣನ ಸಹಾಯಕ್ಕೆ ಸ್ವತಃ ದುರ್ಯೋಧನನೇ ಬಂದನು. ಯುದ್ಧ ಇನ್ನಷ್ಟು ಘೋರವಾಯಿತು. ಒಬ್ಬರನ್ನೊಬ್ಬರು ಮೂದಲಿಸುತ್ತ ಹೋರಾಡಿದರು. ಎರಡೂ ಕಡೆಯ ಸೈನ್ಯಕ್ಕೆ ಬಹಳ ಹಾನಿಯಾಯಿತು.
ಇಡೀ ಬಲವನ್ನು ಹುರಿದುಂಬಿಸಿ ಚಿತ್ರಸೇನನು ಮುಂದೆ ತಂದು ಕೊನೆಗೆ ದುರ್ಯೋಧನ, ಮತ್ತು ಇತರ ಇಪ್ಪತ್ತೈದು ಜನರನ್ನು ಸೆರೆ ಹಿಡಿದು ಕರೆ ತಂದು ಅವರ ಆಯುಧಗಳನ್ನು ತೆಗೆದಿರಿಸಿ ಕುಳ್ಳಿರಿಸಿದರು. ಭೀಮಾದಿಗಳಿಗೆ ಬಹಳ ಸಂತಸವಾಯಿತು. ತಮ್ಮ ವೈರಿಗಳಿಗೆ ತಕ್ಕ ಶಾಸ್ತಿಯಾಯಿತು ಎಂದು ನಕ್ಕರು.
ಆದರೆ ಇದೆಲ್ಲವನ್ನೂ ಕೇಳಿದ ಧರ್ಮಜ ದುಗುಡಕ್ಕೊಳಗಾದನು. ತನ್ನ ವಂಶದ ಕೀರ್ತಿಗೆ ಅಪಮಾನವಾಯಿತೆಂದು ನೊಂದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: