ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಜನರನ್ನು ಆಕರ್ಷಿಸುವ ಹಾಗೆ ಮಾಡುತ್ತಿದೆ. ಈಗೀಗ ಆದ್ಯಾ ಪರ್ಸ್ ಕಳ್ಳತನ ಮಾಡಲಾಗಿದೆ. ಇದರಿಂದ ಆದ್ಯಾ ಜೋರಾಗಿ ಕಿರುಚುತ್ತಾ ಇರುತ್ತಾಳೆ. ಆದ್ಯಾ ಕಿರುಚಾಟ ಕಂಡು ಓಡೋಡಿ ಬಂದ ವೇದಾಂತ್ ಏನು ಎಂದಾಗ ಆದ್ಯಾ ಪರ್ಸ್ ಕಳವು ಆಗಿರುವ ಬಗ್ಗೆ ಹೇಳುತ್ತಾಳೆ.ಇದನ್ನು ಕೇಳಿದ ವೇದಾಂತ ಕಳ್ಳನನ್ನು ಬೆನ್ನಟ್ಟಿ ಹೋಗುತ್ತಾನೆಆದರೆ ಕಾಂತ ಓಡಲು ಆಗದಿದ್ದರೂ ಓಡುತ್ತಾನೆ. ಯಾಕೆಂದರೆ ಬಾಸ್ ಕೈ ಗೆ ಸಿಕ್ಕಿ ಬಿದ್ದಿರೆ ಎಲ್ಲಾ ಖೇಲ್ ಖತಂ ಎಂಬುವುದು ಕಾಂತನಿಗೆ ಕೂಡಾ ತಿಳಿದಿದೆ. ಅದರಿಂದ ಜೋರಾಗಿ ಓಡಿ ಹೋಗುತ್ತಾನೆ. ಇನ್ನು ಅವರೆಲ್ಲ ಹೋದ ಬಳಿಕ ಅದಿತಿ ದ್ರುವನ ಬಳಿ ಓಡಿ ಬರುತ್ತಾಳೆ. ಅದಿತಿ ದ್ರುವನನ್ನು ಮುದ್ದಾಡುತ್ತಾ ಇರುತ್ತಾಳೆ. ದ್ರುವ ನೀನು ಇಲ್ಲದೆ ನನಗೆ ಏನೇನೋ ಇಲ್ಲ, ನೀನು ಇದೀಗ ಕೊಂಚ ಮಟ್ಟಿಗೆ ಸರಿ ಹೋಗುತ್ತಾ ಇದ್ದೀಯಾ ಇಂತಹ ಸಂದರ್ಭದಲ್ಲಿ ನನ್ನ ಪ್ರೀತಿ ವಿಚಾರ ನಿನ್ನ ಬಳಿ ಹೇಳಿದರೆ ನಿನಗೆ ಬಹಳ ತೊಂದರೆ ಕೊಡುತ್ತಾರೆ, ಸುಹಾಸಿನಿ ನಿನ್ನ ಜೀವ ತೆಗೆಯಲು ಹಿಂಜರಿಯಲ್ಲ ಹಾಗೆಯೇ ಆಕೆ ನಮ್ಮಿಬ್ಬರನ್ನು ಹೇಗೆ ದೂರ ಮಾಡಬಹುದು ಎಂದು ಯೋಚನೆ ಮಾಡುತ್ತಾಳೆ, ನನ್ನ ಅಕ್ಕಂದಿರು ನಿಮ್ಮ ಮನೆಯ ಸೊಸೆ ಆಗಿದ್ದಕ್ಕೆ ಇಷ್ಟೆಲ್ಲ ಹಂಗಿಸಿ ಮಾತನಾಡುತ್ತಾರೆ ಅಂತಹದರಲ್ಲಿ ಇದೀಗ ಮೂರನೆಯವಳು ಕೂಡ ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡು ಬಿಟ್ಟಳಲ್ಲ ಎಂದೆಲ್ಲ ಆಡಿಕೊಳ್ಳುತ್ತಾರೆ ಎಂದು ಬೇಸರ ಪಟ್ಟುಕೊಂಡು ಇರುತ್ತಾಳೆ .ಬಳಿಕ ದ್ರುವನ ಬಳಿ ಹರಟೆ ಹೊಡೆದುಕೊಂಡು ಇರುತ್ತಾಳೆ. ಇತ್ತ ವೇದಾಂತ ಕಳ್ಳನನ್ನು ಓಡಿಸಿಕೊಂಡು ಹೋಗುವ ಭರದಲ್ಲಿ ದ್ರುವನನ್ನು ಮರೆತೇ ಬಿಟ್ಟಿರುತ್ತಾನೆ. ಇನ್ನು ಮಂಜುನಾಥ್ ಹಾಗೂ ಪರಿಮಳ ತಮ್ಮ ಮಕ್ಕಳ ಬಳಿ ಸೀಮಂತದ ವಿಚಾರ ಮಾತನಾಡುತ್ತಾ ಹೀಗೆ ಬೇರೆ ವಿಚಾರದ ಬಗ್ಗೆಯೂ ಮಾತನಾಡುತ್ತಾರೆ. ಪರಿಮಳ ತನ್ನ ಮಕ್ಕಳನ್ನು ಹಾಡಿ ಹೋಗಳುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada