ಚುನಾವಣಾ ರಣತಂತ್ರಕ್ಕಾಗಿ ‘ಗಿಫ್ಟ್ ಪಾಲಿಟಿಕ್ಸ್’:

ಬೆಂಗಳೂರು : ಮುಂದಿನ ಚುನಾವಣೆಗೆ ರಣತಂತ್ರ ರೂಪಿಸಲು ರಾಜ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಸಿಲಿಕಾನ್‌ ಸಿಟಿಯ ಬಿಬಿಎಂಪಿ ಆಶಾ ಕಾರ್ಯಕರ್ತರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ವಿದೇಶಿ ಹಣ ಹಂಚಿದ್ದು ಫೋಟೋಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.ಬೆಂಗಳೂರಿನ ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾದರಾಯನಪುರದ ವಾರ್ಡ್ 135, ಜೆಜೆಆರ್ ನಗರದ ವಾರ್ಡ್ 136 ಹಾಗೂ ರಾಯಪುರಂನ ವಾರ್ಡ್-127ರ ಆಶಾ ಕಾರ್ಯಕರ್ತರಿಗೆ ಸೌದಿ ಅರೇಬಿಯಾದ 500 ರಿಯಾಲ್‌ ಮುಖಬೆಲೆಯ ವಿದೇಶಿ ಹಣ ನೋಟುಗಳನ್ನ ಹಂಚಿಕೆ ಮಾಡಿದ್ದು, ಭಾರತದಲ್ಲಿ 11,058 ರೂ. ಮೌಲ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೇ ನ್ಯಾಷನಲ್ ಟ್ರಾವೆಲ್ಸ್ ಕಿಟ್‌ನ್ನು ನೀಡಿದ್ದಾರೆ. ಈ ಚುನಾವಣಾ ಸಿದ್ದತೆಗಾಗಿ ಜಮೀರ್ ಅಹ್ಮದ್ ಖಾನ್ ಗಿಫ್ಟ್ ಪಾಲಿಟಿಕ್ಸ್ ಮಾಡಿದ ಫೋಟೋಗಳು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಬಗ್ಗೆ ಇತರ ಚುನಾವಣಾ ಪಕ್ಷಗಳು ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಕಿಡಿಕಾರುತ್ತಿದ್ದಾ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚು. ಆಯೋಗಕ್ಕೆ ಸುಪ್ರೀಂ ನೋಟಿಸ್

Sun Feb 26 , 2023
  ವಿಚಾರಣಾ ನ್ಯಾಯಾಲಯದಿಂದ ಘೋರ ಅಪರಾಧದ ಆರೋಪ ಹೊತ್ತಿರುವ ಹಾಗು ಚಾರಿತ್ರ್ಯವಧೆಯ ಧರ್ಮೋಪದೇಶಕ್ಕೆ ಒಳಗಾಗಿರುವ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆನೆಯಲ್ಲಿ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ.ಈ ಸಂಬಂಧ ಅಗತ್ಯ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನ್ಯಾಯ ಪೀಠ ಹೇಳಿದೆ.ಸರ್ಕಾರಿ ನೌಕರನ ವಿರುದ್ಧ ಘೋರ […]

Advertisement

Wordpress Social Share Plugin powered by Ultimatelysocial