ಚಾಣಕ್ಯ ಪ್ರಕಾರ ಈ ಗುಣಗಳಿರುವ ವ್ಯಕ್ತಿ.

ಪ್ರತಿಯೊಬ್ಬರಿಗೂ ಸಮಾಜದಲ್ಲಿ ಉನ್ನತ ಅಥವಾ ಗೌರವಯುವ ಸ್ಥಾನಕ್ಕೆ ತಲುಪಬೇಕೆಂದು ಖಂಡಿತ ಆಸೆ ಇರುತ್ತದೆ. ಆದ್ರೆ ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ. ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಅದೃಷ್ಟಶಾಲಿಗಳಾಗಿರ್ತಾರೆ ಅಂತವರಿಗೆ ಮಾತ್ರ ಗೌರವಯುತ ಸ್ಥಾನ ಒಲಿಯುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದ್ರೆ ಇದು ನಿಜವಲ್ಲ. ಒರ್ವ ಸಾಮಾನ್ಯ ವ್ಯಕ್ತಿಯು ಕೂಡ ಸಮಾಜದಲ್ಲಿ ಉನ್ನತ ಸ್ಥಾನ ತಲುಪಬಹುದು. ಆಚಾರ್ಯ ಚಾಣಕ್ಯರು ಇದಕ್ಕಾಗಿ ಕೆಲವೊಂದು ಸೂತ್ರಗಳನ್ನು ಹೇಳಿದ್ದಾರೆ. ಇದನ್ನು ಪಾಲಿಸಿದ್ರೆ ನೀವು ಕೂಡ ಸಮಾಜದಲ್ಲಿ ಗೌರವಯುತ ಸ್ಥಾನ ತಲುಪೋದು ನಿಶ್ಚಿತ.

ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಗಾಂಭೀರ್ಯತೆಯನ್ನ ಅಳವಡಿಸಿಕೊಂಡಿರಬೇಕು. ಯಾವುದೇ ಸಣ್ಣ-ಪುಟ್ಟ ವಿಚಾರಗಳಾದ್ರು ಪರವಾಗಿಲ್ಲ ಅದನ್ನ ಅಸಡ್ಡೆಯಿಂದ ಕಾಣಬೇಡಿ. ಮತ್ತೊಂದು ವಿಚಾರ ಅಂದ್ರೆ ಸಮಾಜದಲ್ಲಿ ಯಾರ ಮುಂದೆಯೂ ಕಾಮಿಡಿ ಪೀಸ್‌ ಆಗಲೂ ಹೋಗಬೇಡಿ. ಆಗ ನಿಮ್ಮನ್ನೂ ಯಾರು ಗಂಭೀರವಾಗಿ ಪರಿಗಣಿಸೋದಿಲ್ಲ. ಹೀಗಾಗಿ ಎಲ್ಲಾ ಸಮಯದಲ್ಲೂ ಯಾವುದೇ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಎಲ್ಲೇ ಹೋದರೂ ಗಾಂಭೀರ್ಯತೆ ಬಿಟ್ಟುಕೊಡಬೇಡಿ.

ಪ್ರಾಮಾಣಿಕತೆ

ಚಾಣಕ್ಯನ ಪ್ರಕಾರ ಪ್ರಮಾಣಿಕತೆ ಅನ್ನೋದು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಎಂತಹದ್ದೇ ಸಂಕಷ್ಟದ ಪರಿಸ್ಥಿತಿ ಬಂದರೂ ಕೂಡ ಪ್ರಮಾಣಿಕತೆಯನ್ನು ಬಿಟ್ಟು ಕೊಡಬಾರದು. ನೀವು ಎಷ್ಟೇ ಶ್ರೀಮಂತರಾಗಿರಬಹುದು, ಅಥವಾ ನಿಮ್ಮ ಬಳಿ ಸಿಕ್ಕಾಪಟ್ಟೆ ದುಡ್ಡಿರಬಹುದು ಆದ್ರೆ ಅದ್ಯಾವುದು ಪ್ರಯೋಜನಕ್ಕೆ ಬರೋದಿಲ್ಲ. ನೀವು ಆ ದುಡ್ಡನ್ನು ಎಷ್ಟು ಪ್ರಮಾಣಿಕತೆಯಿಂದ ಗಳಿಸಿದ್ದೀರಾ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಹಾಗಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ತಲುಪೋದಕ್ಕೆ ಸಾಧ್ಯ.

ಜವಾಬ್ದಾರಿಯುತ ನಡವಳಿಕೆ

ಮನುಷ್ಯನಿಗೆ ಜವಾಬ್ದಾರಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದು ಕುಟುಂಬದ ವಿಚಾರವಾಗಲಿ ಅಥವಾ ಬೇರೆ ಯಾವುದೇ ನಿರ್ವಹಣೆ ಇರಲಿ ಜವಬ್ದಾರಿ ಇಲ್ಲದೇ ಹೋದರೆ ಯಾವುದೇ ಕೆಲಸವಾದ್ರೂ ಕೂಡ ಸರಿಯಾಗಿ ನಡೆಯೋದಕ್ಕೆ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯಲ್ಲಿ ಯಾವಾಗ ಸಮರ್ಥ ನಾಯಕತ್ವದ ಗುಣ ಇರುತ್ತದೆಯೋ ಆಗ ಮಾತ್ರ ಆತ ಒಂದಿಡೀ ಸಂಸ್ಥೆಯನ್ನ ಜವಾಬ್ದಾರಿಯಿಂದ ಮುನ್ನಡೆಸೋದಕ್ಕೆ ಸಾಧ್ಯವಾಗುತ್ತದೆ.

ಹುಟ್ಟಿದ ಪ್ರತಿಯೊಬ್ಬರು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯೋದಕ್ಕೆ ಸಾಧ್ಯವಾಗೋದಿಲ್ಲ. ನಮ್ಮಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಆ ಸ್ಥಾನಕ್ಕೆ ಏರುತ್ತಾರೆ. ಚಾಣಕ್ಯನ ಮಾತಿನಂತೆ ಉನ್ನತ ಸ್ಥಾನಕ್ಕೇರಲು ಇಂದಿನಿಂದಾನೇ ನಿಮ್ಮ ಪ್ರಯತ್ನ ಆರಂಭವಾಗಲಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೈಲ್ ಪಾಲಿಶ್ ಹಾಗೂ ಶಾಂಪೂವಿಂದಲೂ ಮಹಿಳೆಯರು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ

Tue Feb 14 , 2023
ನೈಲ್ ಪಾಲಿಶ್ ಹಾಗೂ ಶಾಂಪೂವಿನಿಂದಲೂ ಮಹಿಳೆಯರು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಪಾರ್ಟಿ, ಫಂಕ್ಷನ್‌ಗೆ ಹೋಗುವಾಗ ಅಥವಾ ದೈನಂದಿನ ದಿನಚರಿಯಲ್ಲಿ ಜನರು ಈ ರೀತಿಯ ಉತ್ಪನ್ನವನ್ನು ಬಹಳ ಉತ್ಸಾಹದಿಂದ ಬಳಸುತ್ತಾರೆ.ನೈಲ್ ಪಾಲಿಶ್ಹಾಗೂ ಶಾಂಪೂವಿನಿಂದಲೂ ಮಹಿಳೆಯರು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಪಾರ್ಟಿ, ಫಂಕ್ಷನ್‌ಗೆ ಹೋಗುವಾಗ ಅಥವಾ ದೈನಂದಿನ ದಿನಚರಿಯಲ್ಲಿ ಜನರು ಈ ರೀತಿಯ ಉತ್ಪನ್ನವನ್ನು ಬಹಳ ಉತ್ಸಾಹದಿಂದ ಬಳಸುತ್ತಾರೆ. ತಿಯೊಬ್ಬರೂ ಸುಂದರವಾಗಿ, […]

Advertisement

Wordpress Social Share Plugin powered by Ultimatelysocial