‘ಥೈರಾಯ್ಡ್’ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್:

ಪ್ರಸ್ತುತ ದಿನಮಾನಗಳಲ್ಲಿ ಬಹುತೇಕರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಿಯಂತ್ರಣಕ್ಕಾಗಿ ಪ್ರತಿದಿನ ಮಾತ್ರೆ ಸೇವಿಸುವುದು ಅಗತ್ಯವಾಗಿದ್ದು, ಸಮಸ್ಯೆ ಉಲ್ಬಣಿಸಿದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ. ಇದರ ಮಧ್ಯೆ ಕೃಷಿ ವಿಜ್ಞಾನಿಗಳು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.ಹೌದು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಹೊಸತಳಿಯ ‘ಅರ್ಕಾ ನಿಖಿತಾ’ ಎಂಬ ಹೆಸರಿನ ಹೈಬ್ರಿಡ್ ಬೆಂಡೆಕಾಯಿ, ಥೈರಾಯ್ಡ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ಹೇಳಲಾಗಿದೆ. ಇದನ್ನು ಈಗ ಹೆಸರಘಟ್ಟದ ಐ ಐ ಹೆಚ್ ಆರ್ ಆವರಣದಲ್ಲಿನ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ.100 ಗ್ರಾಂ ಒಣಗಿದ ಈ ಹೈಬ್ರಿಡ್ ಬೆಂಡೆಕಾಯಿಯಲ್ಲಿ 32 ಮೈಕ್ರೋ ಗ್ರಾಮಿನಷ್ಟು ಅಯೋಡೀನ್ ಅಂಶವಿರುತ್ತದೆ ಎಂದು ಹೇಳಲಾಗಿದ್ದು, ಜೊತೆಗೆ ಹೇರಳವಾದ ನಾರಿನಂಶ ಹೊಂದಿದೆ. ಅಲ್ಲದೆ ಕೆಂಪು ರಕ್ತಕಣ ವೃದ್ಧಿಸುವ ಗುಣವನ್ನು ಇದು ಹೊಂದಿದ್ದು, ನೆನಪಿನ ಶಕ್ತಿ ಹಾಗೂ ಕ್ಯಾನ್ಸರ್ ನಿಯಂತ್ರಣಕ್ಕೂ ಸಹಕಾರಿ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜನಾರ್ಧನ ರೆಡ್ಡಿ ಹೊಸ ಪಕ್ಷ, ಗಂಗಾವತಿಯಿಂದ ಸ್ಪರ್ಧೆ ...!

Sun Feb 26 , 2023
ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಜನಾರ್ಧನರಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಈಗಿನ ಸ್ವ ಜಿಲ್ಲೆಯಲ್ಲಿ ರಡ್ಡಿ ರಾಜಕೀಯ ಬಗ್ಗೆ ಬಿಜೆಪಿ ಮುಖಂಡರಲ್ಲಿ ಸ್ಪಷ್ಠತೆ ಇಲ್ಲ. ಎಲ್ಲವನ್ನು ಕಾದು ನೋಡುವುದಾಗಿ ಹೇಳಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೊಸ ಪಕ್ಷ ಕಟ್ಟಿ ಪೀಕಲಾಟ ಮಾಡಿಕೊಂಡಿದ್ದಾರೆ, ಕಲ್ಯಾಣ ಕರ್ನಾಟ ಪ್ರಗತಿ ಪಕ್ಷಕ್ಕೆ ಚುನಾವಣೆಗೆ ಪ್ರಬಲ ಅಭ್ಯರ್ಥಿಗಳು ಸಿಗದೆ […]

Advertisement

Wordpress Social Share Plugin powered by Ultimatelysocial