ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಜನಾರ್ಧನರಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಈಗಿನ ಸ್ವ ಜಿಲ್ಲೆಯಲ್ಲಿ ರಡ್ಡಿ ರಾಜಕೀಯ ಬಗ್ಗೆ ಬಿಜೆಪಿ ಮುಖಂಡರಲ್ಲಿ ಸ್ಪಷ್ಠತೆ ಇಲ್ಲ. ಎಲ್ಲವನ್ನು ಕಾದು ನೋಡುವುದಾಗಿ ಹೇಳಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೊಸ ಪಕ್ಷ ಕಟ್ಟಿ ಪೀಕಲಾಟ ಮಾಡಿಕೊಂಡಿದ್ದಾರೆ, ಕಲ್ಯಾಣ ಕರ್ನಾಟ ಪ್ರಗತಿ ಪಕ್ಷಕ್ಕೆ ಚುನಾವಣೆಗೆ ಪ್ರಬಲ ಅಭ್ಯರ್ಥಿಗಳು ಸಿಗದೆ ರೆಡ್ಡಿಗೆ ಟೆನ್ಷನ್ ಶುರುವಾಗಿದ್ದೆ. ಕಲ್ಯಾಣ ಕರ್ನಾಟಕದಲ್ಲಿ 20 ಸೀಟು ಗೆಲುವೆಗೆ ತಂತ್ರ ರೂಪಿಸಿರುವ ರೆಡ್ಡಿ, ರಾಜ್ಯದಲ್ಲಿ 40-50 ಸೀಟು ಗೆಲುವಿಗೆ ತಂತ್ರ ರೂಪಿಸಿರುವ ರೆಡ್ಡಿ , ಆರಂಭದಲ್ಲಿಯೇ ರೆಡ್ಡಿಯ ಹೊಸ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯಾಗಿದ್ದೆ, ಗಂಗಾವತಿ-ಬಳ್ಳಾರಿ ಹೊರತುಪಡಿಸಿ ರಾಜ್ಯದಲ್ಲಿ ರೆಡ್ಡಿಗೆ ಸೋಲಿನ ಆತಂಕ ಶುರುವಾಗಿದ್ದೆ. ಪಕ್ಷ ಸಂಘಟನೆಗೂ ಸೂಕ್ತ ಕಾರ್ಯಕರ್ತರು ಸಿಗದೆ ಒದ್ದಾಟ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada