ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಷ್ಕರಕ್ಕೆ ನಾಳೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೇರಿ ಸಿಬ್ಬಂದಿ ಗೈರು ಹಾಜರಾಗುವ ಮೂಲಕ ನೌಕರರ ಸಂಘದ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.ಹೆರಿಗೆ ತುರ್ತು ಚಿಕ್ಸಿತೆ ಹೊರತು ಪಡಿಸಿ ಉಳಿದ ಯಾವ ಸೇವೆ ಲಭ್ಯ ಇರುವುದಿಲ್ಲ. ವೈದ್ಯರು ಕತ್ಯರ್ವಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ನಾಯ್ಯಯುತ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರಕ್ಕೆ ಕರೆ ನೀಡಿದ್ದು ಈ ಮುಷ್ಕರಕ್ಕೆ ರಾಮದುರ್ಗ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಕತ್ಯರ್ವಕ್ಕೆ ಗೈರುಹಾಜರಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.ಶಿಘ್ರವೇ ೭ ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನ ಪಡೆದು ಶೇ ೪೦% ರಷ್ಟು ವೇತನ ಹೆಚ್ಚಳದ ಸರ್ಕಾರಿ ಆದೇಶ ಹೊರಡಿಸುವಂತೆ ಮತ್ತು ಎನ್ ಪಿಎಸ್ ಬದಲಾಗಿ ಓಪಿಎಸ್ ಜಾರಿಗೆ ಒತ್ತಾಯಿಸಿದರು ಈ ವೇಳೆ ಮುಖ್ಯವೈದ್ಯಾಧಿಕಾರಿ ನಿರ್ಮಲ ಹಂಜಿ,ಸಹಾಯಕ ಆಡಳಿತ ಅಧಿಕಾರಿ ಪಿ.ಎಂ ಪಾಟೀಲ,ವೈದ್ಯರಾದ ವರುಣ ಬೀಳಗಿ,ಡಾ ಎ ಸ್ ಬಾಳಿ, ಡಾ ಕಿರಣ ಶ್ಯಾವಿ, ಸಿಬ್ಬಂದಿಗಳಾದ ಗಿರೀಶ ದಾಸರ,ಎಸ್ ಎಚ್ ಬಾಲಾಬಾಯಿ,ಸುರೇಶ ಬೆನಕಟ್ಟಿ ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada