ಎಚ್. ಎಲ್. ಕೇಶವಮೂರ್ತಿ ಹಾಸ್ಯ ಕಲಾವಿದ

ಎಚ್. ಎಲ್. ಕೇಶವಮೂರ್ತಿ ಹಾಸ್ಯ ಸಾಹಿತಿಗಳಾಗಿ, ತಾಂತ್ರಿಕ ಪ್ರಾಧ್ಯಾಪಕರಾಗಿ ಮತ್ತು ಪತ್ರಕರ್ತರಾಗಿ ಹೆಸರಾಗಿದ್ದವರು.
ಕೇಶವಮೂರ್ತಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ 1939ರ ಡಿಸೆಂಬರ್ 28ರಂದು ಜನಿಸಿದರು. ತಂದೆ ಎಚ್.ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ. ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಬೆಳ್ಳೂರು, ನಾಗಮಂಗಲ, ಮೇಲುಕೋಟೆಯಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ ಪದವಿ, ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಇ. ಪದವಿಗಳನ್ನು ಪಡೆದರು.
ಕೇಶವಮೂರ್ತಿ ಅವರು ಮಂಡ್ಯದ ಪಿ.ಇ.ಎಸ್. ಇಂಜಿನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಕೇಶವಮೂರ್ತಿ ಅವರು ಓದಿದ್ದು ಇಂಜಿನಿಯರಿಂಗ್ ಆದರೂ ಹವ್ಯಾಸವಾಗಿ ರೂಢಿಸಿಕೊಂಡದ್ದು ವಿಡಂಬನೆ, ಹಾಸ್ಯ, ವ್ಯಂಗ್ಯ ಮತ್ತು ಅಣಕು. ನಾಡಿನ ಪ್ರಸಿದ್ಧ ಪತ್ರಿಕೆಗಳ ಮೂಲಕ ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯದ ಸವಿಯುಣಿಸಿದರು. ಇವರು ಬರೆದ ಹಾಸ್ಯ ಬರೆಹಗಳೆಲ್ಲಾ ಹಲವಾರು ಸಂಕಲನಗಳಾಗಿ ಹೊರಬಂದಿವೆ. ನಿನ್ಯಾಕೋ ನಿನ್ನ ಹಂಗ್ಯಾಕೋ ಮಾವ?, ಎಂಗಾರ ಟಿಕೆಟ್ ಕೊಡಿ, ಹರಕುತುಟಿ ಮಹಾತ್ಮೆ, ಇಸ್ಪೀಟ್ ನ್ಯಾಯ, (ಅ)ನೀತಿಕಥೆಗಳು, ಹನುಮ ನಿನ್ನ ನಾಮ ಒಂದೇ, ಥೂ ! ಹಲ್ಕಾ!!, ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಮುಂತಾದವು ಇವರ ನಗೆ ಬರೆಹ ಸಂಕಲನಗಳು.
ಗೌರವಾನ್ವಿತ ದಗಾಕೋರರು, ಗಾಂಧಿ ಅವತ್ತು ಹುಟ್ಟಬಾರದಿತ್ತು! , ದೇವರುಗಳ ಟೈಮೇ ಸರಿಯಿಲ್ಲ, ಪಾತಕಿಯೇ ಪರಮಾತ್ಮ ಮುಂತಾದವು ವೈಚಾರಿಕ ವಿಡಂಬನೆಗಳು. 2011ರಲ್ಲಿ ಆಯ್ದ ಬರಹಗಳ ಸಂಕಲನ ‘ಬೆಸ್ಟ್ ಆಫ್ ಎಚ್.ಎಲ್. ಕೇಶವಮೂರ್ತಿ’ ಮತ್ತು ‘ಪುಗಸಟ್ಟೆ ಪಾರಾಯಣ’ ಕೃತಿಗಳು ಬಿಡುಗಡೆಗೊಂಡವು. ಇವರು ಸಂಪಾದಿಸಿದ ಕೃತಿಗಳು ‘ಕನ್ನಡದಲ್ಲಿ ವಿನೋದ ಸಾಹಿತ್ಯ’ (ಕಾಲು ಶತಮಾನದ ವಿನೋದ ಸಾಹಿತ್ಯ – ಪ್ರೊ.ಅ.ರಾ. ಮಿತ್ರ ಮತ್ತು ಪ್ರೊ. ಕೆ.ನ. ಶಿವತೀರ್ಥನ್‌ರೊಡನೆ), ‘ಹಾಸ್ಯಕಸ್ತೂರಿ’ (ನಾ. ಕಸ್ತೂರಿಯವರ ಬರೆಹಗಳು – ಪ್ರೊ. ಕೆ.ಬಿ. ಪ್ರಸಾದರೊಡನೆ) ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ‘ವಿನೋದ ಸಾಹಿತ್ಯ – 1996’ ಮುಂತಾದವು. ವೈವಾವೋಸಿ (ನಾಟಕ), ಹಿತ್ತಲಗಿಡವೇ ಮದ್ದು, ಯಾರದು ತಪ್ಪು?, ಕರಿನಾಯಿ ಸತ್ತಾಗ ಮುಂತಾದ 12 ಕೃತಿಗಳನ್ನು ನವಸಾಕ್ಷರರಿಗಾಗಿ ರಚಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಆಶ್ವಿನಿ ಆಶೋಕ್ ಅದ್ಭುತ ಛಾಯಾಗ್ರಾಹಕಿ.

Wed Dec 28 , 2022
ಅವರ ಛಾಯಾಗ್ರಹಣ ಮತ್ತು ಅವರು ಕನ್ನಡದಲ್ಲಿ ಮೂಡಿಸುವ ಲಹರಿಗಳು ಅನುಪಮವಾದದ್ದು. ಡಿಸೆಂಬರ್ 28 ಅಶ್ವಿನಿ ಅವರ ಜನ್ಮದಿನ. ಮೂಲತಃ ಮುಂಡರಗಿ ಅವರಾದ ಇವರು ಮುಂಡರಗಿ ಮತ್ತು ಹೊಸಪೇಟೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ತಮ್ಮ ಕುಟುಂಬದೊಂದಿಗೆ ಬಳ್ಳಾರಿಯ ನಿವಾಸಿಯಾಗಿದ್ದಾರೆ. ಅಶ್ವಿನಿ ಅಶೋಕ್ ಅವರ ಲಲಿತ ಪ್ರಬಂಧದಂತಹ ಹಾಸ್ಯ ಲೇಪನದ ನಲ್ಮೆಯ ಬರಹಗಳು ಫೇಸ್ಬುಕ್ ಆವರಣದಲ್ಲಿ ನನ್ನನ್ನು ಆಕರ್ಷಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ದೃಶ್ಯ ಕಾವ್ಯವನ್ನು ಅದ್ಭುತವಾಗಿ ತೆರೆದಿಡುತ್ತಾ […]

Advertisement

Wordpress Social Share Plugin powered by Ultimatelysocial