ಬೆಂಗಳೂರು.ಫೆ.21-ಶಿವಮೊಗ್ಗದಲ್ಲಿ ಯುವಕ ಹರ್ಷ ಹಂತಕರ ವಿರುದ್ಧ ಸರ್ಕಾರ ಉಗ್ರ ಕ್ರಮ ಕೈಗೊಳ್ಳಿ ಎಂದುಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.ಸ್ದುಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಭದ್ರಾವತಿ ಶಾಸಕ ಸಂಗಮೇಶ್ ಅವರಿಂದ ಮಾಹಿತಿ ಪಡೀತಿದ್ದೇನೆ .ಪ್ರಕರಣ ಸಂಬಂಧ ಸೂಕ್ತವಾದ ತನಿಖೆ ಆಗಬೇಕು , ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಆಗಬಾರದು . ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು. ಈ ವಿಚಾರವನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳಬಾರದು. ಕುವೆಂಪು ಅವರ ಶಾಂತಿಯ ತೋಟದಲ್ಲಿ ಇದೆಲ್ಲಾ ಆಗಬಾರದು ಎಂದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada