ನೆನೆಸಿ ತಿನ್ನುವ ಸೂಪರ್‌ಫುಡ್‌ಗಳಿಂದ ಆಗುವ ಪ್ರಯೋಜನಗಳು.

ಬೆಂಗಳೂರು:ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸೂಪರ್‌ಫುಡ್‌ಗಳು (Super Food) ಇಡೀ ದಿನ ನಮ್ಮನ್ನು ಸಶಸ್ತರನ್ನಾಗಿ ಇರಿಸಲು ಸಾಧ್ಯವಾಗುತ್ತದೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

ನಮ್ಮ ಅಹಾರದಲ್ಲಿ ಮಾಡುವ ಸಣ್ಣ ಬದಲಾವಣೆಗಳೂ ಕೆಲವೊಮ್ಮೆ ದೊಡ್ಡ ಲಾಭವನ್ನು ತರಬಹುದು.

ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸೂಪರ್‌ಫುಡ್‌ಗಳು ಇಡೀ ದಿನ ನಮ್ಮನ್ನು ಸಶಸ್ತರನ್ನಾಗಿ ಇರಿಸಲು ಸಾಧ್ಯವಿದೆ. ಅಂಥ ಆಹಾರಗಳು ಯಾವುವು ಮತ್ತು ಅವುಗಳ ಪ್ರಯೋಜನವೇನು ಎಂಬುದನ್ನು ನೋಡೋಣ.

ಸೂಕ್ಷ್ಮ ಪೋಷಕಾಂಶಗಳ ಕೊರತೆ ಬಹಳಷ್ಟು ಜನರನ್ನು ಕಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಉದಾ, ಕಬ್ಬಿಣ, ಫೋಲೇಟ್‌, ವಿಟಮಿನ್‌ ಬಿ12 ಮುಂತಾದ ಕೊರತೆಗಳಿಂದ ಅನೀಮಿಯಾ ಉಂಟಾಗಬಹುದು. ವಿಟಮಿನ್‌ ಡಿ ಕೊರತೆಯಿಂದ ಮೂಳೆಗಳು ದುರ್ಬಲ ಆಗಬಹುದು. ಒಣದ್ರಾಕ್ಷಿ, ಬಾದಾಮಿ, ಶೇಂಗಾ, ವಾಲ್‌ನಟ್‌ ಮುಂತಾದವನ್ನು ರಾತ್ರಿಡೀ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಲಾಭಗಳು ಬಹಳಷ್ಟು. ವಿಟಮಿನ್‌ ಬಿ, ಫೋಲೇಟ್‌, ವಿಟಮಿನ್‌ ಇ ಮುಂತಾದ ಹಲವಾರು ಅಗತ್ಯ ಪೋಷಕಾಂಶಗಳನ್ನು ಇವುಗಳಿಂದ ಪಡೆಯಬಹುದು.

ಬಾದಾಮಿ
ನೆನೆಸಿದ ಬಾದಾಮಿಗಳು ಪಿಸಿಒಎಸ್‌ (ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್) ಸಮಸ್ಯೆ ದೂರ ಮಾಡಲು‌ ನೆರವಾಗುತ್ತವೆ. ಮಾತ್ರವಲ್ಲ, ಮುಖದ ಮೇಲಿನ ಮೊಡವೆ, ಕಪ್ಪುಕಲೆ ನಿವಾರಿಸಿ ಹೊಳೆಯುವ ತ್ವಚೆಯನ್ನು ನೀಡುತ್ತವೆ. ಏಳೆಂಟು ಬಾದಾಮಿಯನ್ನು ರಾತ್ರಿ ಚನ್ನಾಗಿ ತೊಳೆದು ಕುಡಿಯುವ ನೀರಿಗೆ ಹಾಕಿ, ಮಾರನೇದಿನ ಬೆಳಗ್ಗೆ ಖಾಲಿ ಹೊಟ್ಟೆಯನ್ನು ತಿನ್ನುವುದು ಕಷ್ಟವೇನಲ್ಲ.

ಇದನ್ನೂ ಓದಿ   ಆರೋಗ್ಯ ಸುಧಾರಿಸಬೇಕೆ? ಹಾಗಾದರೆ ನಗುತ್ತಿರಿ!

ಒಣದ್ರಾಕ್ಷಿ ಮತ್ತು ಕೇಸರಿ
ಹತ್ತು ಒಣದ್ರಾಕ್ಷಿ ಮತ್ತು ಎರಡು ದಳ ಕೇಸರಿಯನ್ನು ರಾತ್ರಿ ನೆನೆಸಿ, ಬೆಳಗ್ಗೆ ತಿನ್ನುವುದರಿಂದ ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಅನಿಯಮಿತ ಋತುಸ್ರಾವವನ್ನೂ ಸರಿಪಡಿಸಿಕೊಳ್ಳಲು ಇದು ನೆರವಾಗುತ್ತದೆ.

ಕಪ್ಪುದ್ರಾಕ್ಷಿ
ಕಪ್ಪುದ್ರಾಕ್ಷಿಯೂ ಮಾಮೂಲಿ ಒಣದ್ರಾಕ್ಷಿಯಂತೆಯೇ ದೊರೆಯುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕೂದಲು ಉದುರುವುದನ್ನು ಕಡಿಮೆ ಮಾಡುವ ಸಾಮರ್ಥ್ಯ ನೆನೆಸಿದ ಕಪ್ಪುದ್ರಾಕ್ಷಿಗಳಲ್ಲಿ ಇದೆ.

ವಾಲ್‌ನಟ್‌
ಇದಂತೂ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಉಪಯುಕ್ತ. ಎರಡು ವಾಲ್‌ನಟ್‌ಗಳನ್ನು ನೀರಿಗೆ ಹಾಕಿದರೂ ಸಾಕಾಗುತ್ತದೆ. ಮೆದುಳನ್ನು ಚುರುಕಾಗಿಸಿ, ನೆನಪಿನ ಶಕ್ತಿ ಹೆಚ್ಚಿಸಿ ಏಕಾಗ್ರತೆಯನ್ನು ಉತ್ತಮಗೊಳಿಸುವ ಶಕ್ತಿ ವಾಲ್‌ನಟ್‌ಗಳಿಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀರು ಕುತಿಯುವುದು ನಮಗೆ ಎಷ್ಟೊಂದು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.

Thu Jan 19 , 2023
ನೀರು ಕುತಿಯುವುದು ನಮಗೆ ಎಷ್ಟೊಂದು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ನೀರು ಕೇವಲ ನಮ್ಮ ಬಾಯಾರಿಕೆಯನ್ನು ನೀಗಿಸದೆ, ನಮ್ಮ ದೇಹವನ್ನು ಸಾಕಷ್ಟು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿರಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೂ ಕೂಡ ನಾವು ನೀರು ಕುಡಿಯುವ ಅಭ್ಯಾಸಗಳು ಆರೋಗ್ಯಕರವೇ ಅಥವಾ ಇಲ್ಲವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನುಗಳು ಇತ್ಯಾದಿಗಳ ಮೇಲೆ ಅದು ಪರಿಣಾಮ ಬೀರುವುದರಿಂದ […]

Advertisement

Wordpress Social Share Plugin powered by Ultimatelysocial