ಹೊಸ ವರ್ಷಕ್ಕೆ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಹೊಸ ವರ್ಷಕ್ಕೆ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಬೆಂಗಳೂರು: ಹೊಸ ವರ್ಷದ ಕೊಡುಗೆಯಾಗಿ ರೈತರ ಮನೆ ಬಾಗಿಲಿಗೆ ಉಚಿತವಾಗಿ ಪಹಣಿ ಮತ್ತು ದಾಖಲೆಗಳನ್ನು ತಲುಪಿಸುವ ವಿನೂತನ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಜನವರಿ 2 6ರಂದು 45 ಲಕ್ಷ ರೈತರ ಮನೆ ಬಾಗಿಲಿಗೆ ಉಚಿತವಾಗಿ ಪಹಣಿ ಮತ್ತು ಇತರೆ ದಾಖಲೆ ತಲುಪಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ದಾಖಲೆ ಇಲ್ಲದ ಕಾರಣ ಇನಾಂ ಸಾಗುವಳಿ ರೈತರಿಗೆ ಸಾಲ ಪಡೆಯುವುದು ಕಷ್ಟವಾಗಿದೆ. ತಿಳಿವಳಿಕೆ ಕೊರತೆ ಕಾರಣ ರೈತರು ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ರೈತರಿಗೆ ಉಚಿತವಾಗಿ ಪಹಣಿ ಸೇರಿದಂತೆ ಇತರೆ ದಾಖಲೆ ತಲುಪಿಸಲಾಗುವುದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನವರಿ 26ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಪಹಣಿ ದಾಖಲೆಗಳನ್ನು ಉಚಿತವಾಗಿ ತಲುಪಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Crazy Star New Year Wish: ನೀನು ನೀನಾಗಿರು ಸಂದೇಶ ಕೊಟ್ಟ ಕ್ರೇಜಿಸ್ಟಾರ್ ​| V. Ravichandran | Speed News

Sat Jan 1 , 2022
Crazy Star New Year Wish: ನೀನು ನೀನಾಗಿರು ಸಂದೇಶ ಕೊಟ್ಟ ಕ್ರೇಜಿಸ್ಟಾರ್ ​| V. Ravichandran | Speed News Please follow and like us:

Advertisement

Wordpress Social Share Plugin powered by Ultimatelysocial