ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶಗಳು ಹೆಚ್ಚಾಗಿದೆ…ಈ ರೀತಿಯಾಗಿ ಅವಕಾಶ ಹೆಚ್ಚಾದ ಬೆನ್ನಲ್ಲೇ ಹೊಸ ಚಿತ್ರತಂಡವೊಂದು ರೆಡಿಯಾಗಿದೆ. ಕನ್ನಡ ಚಿತ್ರರಂಗದ ತ್ರಿವಿಕ್ರಮ ಸಾಪಲ್ಯ ನಿರ್ಮಾಣದಲ್ಲಿ ಹಂಟರ್ ಎಂಬ ಚಿತ್ರ ಮೂಡಿ ಬರುತ್ತಿದ್ದು, ಚಿತ್ರಕ್ಕೆ ನವೀನ್ ಕೃಷ್ಣರವರ ನಿರ್ದೇಶನವಿದೆ..ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಡಾ. ಅಂಬರೀಶ್ ಅಡಿಟೋರಿಯಂನಲ್ಲಿ ಇಂದು ಹಂಟರ್ ಚಿತ್ರದ ಮೂಹರ್ತ ನೇರವೇರಿದೆ…ಇನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹಾಗೂ ಪ್ರಿಯಾಂಕ ಆಗಮಿಸಿದ್ದು, ಹಂಟರ್ ಚಿತ್ರತಂಡಕ್ಕೆ ಶುಭಹಾರೈಸಿದ್ದರು.ಈ ವೇಳೆ ಮಾತಾನಾಡಿದ ಉಪೇಂದ್ರರವರು, ನಿರಂಜನ್ ರವರು “ A” ಸಿನಿಮಾದಲ್ಲಿ ಚಿಕ್ಕ ಮಗುವಿನ ಪಾತ್ರದಲ್ಲಿ ನಟಿಸಿದ್ದರು ಎಂದಿದ್ದಾರೆ.ಕಾರ್ಯಕ್ರಮದಲ್ಲಿ ಸಾಧುಕೋಕಿಲ ಸೇರಿದ್ದಂತೆ ಹಲವು ಗಣ್ಯರು ಭಾಗಿಯಾಗಿದ್ರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada