ಪಕ್ಷದಲ್ಲಿ ಅವಮಾನ ಮಾಡಿ ನನ್ನನ್ನು ಹೊರ ಹಾಕಿದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ರೀತಿಯ ಡ್ಯಾಮೇಜ್ ಮಾಡ್ತೇನೆ ಎಂದು ಕೆ.ಜಿ.ಎಫ್ ಬಾಬು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಅವಶ್ಯಕತೆ ಇಲ್ಲಾಂದ್ರೆ ಗೌರವದಿಂದ ಪಕ್ಷದಿಂದ ಹೊರ ಕಳಿಸಿ. ಅವಮಾನ ಮಾಡಿದ್ರೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಮಾಡ್ತೇನೆ ಎಂದರು.ಒಂದು ವೇಳೆ ಕಾಂಗ್ರೆಸ್ ನಿಂದ ಹೊರಬಂದರೆ, ಯಾವುದಾದರೂ ಪಕ್ಷಕ್ಕೆ ಹೋಗುತ್ತೇನೆ ಹೊರತು ಪಕ್ಷೇತರವಾಗಿ ಸ್ಪರ್ಧೆ ಮಾಡಲ್ಲ ಎಂದರು. ನಾನು ಸ್ಲಮ್ ನಲ್ಲಿ ಇದ್ದವನು ನನಗೆ ಸ್ಲಮ್ ಬುದ್ದಿನೇ. ನಾನು ಸಾಯುವ ತರ ಹೀಗೆ ಇರ್ತೇನೆ ಎಂದರು.ನನ್ನನ್ನು ಕೆಪಿಸಿಸಿ ಕಚೇರಿಗೆ ಬರುವಂತೆ ಕರೆದಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡುತ್ತಿದ್ದೆ. ನನ್ನ ಕಡೆಯಿಂದ ಏನೂ ತಪ್ಪಾಗಿಲ್ಲ, ನಾನು ತಪ್ಪು ಮಾತನಾಡಿಲ್ಲ. ಡಿಕೆಶಿ, ಸಿದ್ದರಾಮಯ್ಯ ರಾತ್ರಿ ಹಗಲು 224 ಕ್ಷೇತ್ರಕ್ಕೆ ಹೋಗಿ ಕಷ್ಟ ಪಡ್ತಾರೆ. ಆದರೆ ಕೆಪಿಸಿಸಿ ಕಚೇರಿಯಲ್ಲಿ ಸಲೀಂ ಅಹ್ಮದ್ ಅವರಿಂದ ಮಿಸ್ ಯೂಸ್ ಆಗ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada