ಶ್ರೀಲಂಕಾ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ಕೆಟ್ಟ ಶಾಟ್ಗೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದ ಸಂಜು ಸ್ಯಾಮ್ಸನ್ ವಿರುದ್ಧ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಕೇರಳ ಮೂಲದ ಬ್ಯಾಟ್ಸ್ಮನ್ ಅಪಾರ ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ, ಅವರು ಕೆಲವೊಮ್ಮೆ ಬ್ಯಾಟಿಂಗ್ನಲ್ಲಿ ಬೇಸರ ಮೂಡಿಸುತ್ತಾರೆ ಎಂದಿದ್ದಾರೆ.ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಲು ಸಂಜು ಸ್ಯಾಮ್ಸನ್ಗೆ ಅತ್ಯುತ್ತಮ ಅವಕಾಶವಿತ್ತು. ಆದರೆ, ಆಫ್ ಸ್ಪಿನ್ನರ್ ಧನಂಜಯ ಡಿ ಸಿಲ್ವಾ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದ ಕ್ಯಾಚಿತ್ತು ನಿರ್ಗಮಿಸಿದ್ದರು. ಇದಕ್ಕೂ ಮುನ್ನ ಅವರು ಒಂದು ಜೀವದಾನ ಪಡೆದುಕೊಂಡಿದ್ದರು. ಒಟ್ಟು ಆಡಿದ 6 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ನಿರ್ಗಮಿಸಿದರು.ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, “ಸಂಜು ಸ್ಯಾಮ್ಸನ್ ಅವರು ಬಲವಾದ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡು ಲೀಡಿಂಗ್ ಎಡ್ಜ್ ಆಗುವ ಮೂಲಕ ಶಾರ್ಟ್ ಥರ್ಡ್ ಮ್ಯಾನ್ ಕೈ ಸೇರಿತು. ಅಂದಹಾಗೆ ಸಂಜು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ, ಕೆಲವೊಮ್ಮೆ ಅವರು ಕಳಪೆ ಶಾಟ್ ಸೆಲೆಕ್ಷನ್ನಿಂದ ಹಿನ್ನಡೆ ಅನುಭವಿಸುತ್ತಾರೆ. ಈ ಪಂದ್ಯದಲ್ಲಿಯೂ ಕೂಡ ಅವರು ಬೇಸರ ಮೂಡಿಸಿದ್ದಾರೆ,” ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada