ಮದ್ಯಪಾನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನ ಮನಗಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶ್ರೀ. ಸುತ್ತೂರು ಮಠ ಮತ್ತು ಜೆ.ಎಸ್.ಎಸ್.ಮಹಾವಿದ್ಯಾಪೀಠ ,ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿಬಿರವನ್ನ ಏರ್ಪಡಿಸಲಾಗಿತ್ತು…ಗುಂಡ್ಲುಪೇಟೆ ಪಟ್ಟಣದ ಜೆ ಎಸ್ ಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಡಿತ ಚಟ ಬಿಡಿಸುವ ಕುರಿತು ಮಾಹಿತಿ ನೀಡಲಾಯಿತು..2014 ನೇ ಸಾಲಿನಿಂದ ಉಚಿತ ಕುಡಿತ ಬಿಡಿಸುವ ಶಿಬಿರಗಳನ್ನ ಪ್ರಾರಂಭಿಸಲಾಗಿದ್ದು, ಒಟ್ಟಾರೆ ನಡೆದ ಹತ್ತು ಶಿಬಿರಗಳಲ್ಲಿ 664 ಮಂದಿ ವ್ಯಸನ ಮುಕ್ತರಾಗಿದ್ದಾರೆ..ಶಿಬಿರದ ಅವಧಿಯಲ್ಲಿ ಪ್ರತಿನಿತ್ಯ ವ್ಯಾಯಾಮ, ಧ್ಯಾನ, ಆರೋಗ್ಯ ತಪಾಸಣೆ, ಉಪನ್ಯಾಸಗಳೊಂದಿಗೆ ವಿಚಾರ ವಿನಿಮಯ ಆಪ್ತ ಸಮಾಲೋಚನೆ ನಡೆಯುತ್ತದೆ. ಮದ್ಯ ವ್ಯಸನಿಗಳನ್ನ ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಶಿಬಿರದ ಮುಖ್ಯ ಉದ್ದೇಶವಾಗಿದ್ದು ಮದ್ಯವ್ಯಸನಿಗಳಿಗೆ ಶಿಬಿರದ ನಂತರ ಹೊಸ ಜೀವನಕ್ಕೆ ಬೇಕಾಗುವ ಸಾಮಾಜಿಕ ನೆರವನ್ನ ಸಂಸ್ಥೆಯು ಒದಗಿಸುತ್ತದೆ……
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada