ಹೈಕೋರ್ಟ್ಗಳ ನ್ಯಾಯಾಧೀಶರ ವರ್ಗಾವಣೆ ಮತ್ತು ಪದೋನ್ನತಿ ವಿಚಾರ ವಿಳಂಬ ಮಾಡಿದರೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಒಂದು ವಾರದ ನಂತರ ಪ್ರತಿಕ್ರಿಯಿಸಿರುವ ಕಾನುನು ಸಚಿವ ಕಿರಣ್ ರಿಜಿಜು ಯಾವುದೇ ಕಾಲಮಿತಿ ಇಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.೧೦ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ತಿಳಿಸಿದ್ದಾರೆ. ನ್ಯಾಯಾಧೀಶರ ವರ್ಗಾವಣೆ ಮತ್ತು ಪದೋನ್ನತಿ ಪ್ರಕ್ರಿಯೆಯ ವಿವಿಧ ಹಂತದಲ್ಲಿವೆ ಈ ಶಿಫಾರಸುಗಳನ್ನು ತಿಳಿಸುವಲ್ಲಿ ಯಾವುದೇ ತುರ್ತು ತೋರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ ಅವರು “ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಕಾರ್ಯವಿಧಾನದ ಜ್ಞಾಪಕ ಪತ್ರದಲ್ಲಿ ಯಾವುದೇ ಕಾಲಮಿತಿಯನ್ನು ಸೂಚಿಸಲಾಗಿಲ್ಲ. ಹೊಸ ಕರಡು ರಚಿಸಿದಂತೆ ಸರ್ಕಾರ ಹಳೆಯ ಎಂಒಪಿಯನ್ನೇ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ. ೨೦೧೬ ರ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಐದು ನ್ಯಾಯಾಧೀಶರ ಸಂವಿಧಾನ ಪೀಠದ ನಿರ್ದೇಶನದ ಮೇಲೆ ನಡೆಸಲ್ಪಡುವ ಮುಖ್ಯನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂನಿಂದ ಇನ್ನೂ ಅವುಗಳನ್ನು ಅಂಗೀಕಾರ ಮಾಡಿಲ್ಲ ಎಂದಿದ್ದಾರೆ.ಹೈಕೊರ್ಟ್ ಗಳಿಗೆ ನ್ಯಾಯಮೂರ್ತಿಗಳ ಪದೋನ್ನತಿ ಮತ್ತು ವರ್ಗಾವಣೆಯ ಕುರಿತು ಕೇಂದ್ರದ “ನಿರ್ಧಾರ” ತೊಂದರೆದಾಯಕವಾಗಿದೆ ಮತ್ತು “ಕಷ್ಟಕರ ಮತ್ತು ಅಸಹ್ಯಕರ” ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲು ಬರುವುದಿಲ್ಲ. ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿ ಸೂಕ್ತ ನಿರ್ದಾರ ಕೈಗೊಳ್ಳಲಾಗುವುದು ಎಂದಿದ್ದಾರೆ ನ್ಯಾಯಾಲಯ “ಆಡಳಿತಾತ್ಮಕ ಮತ್ತು ನ್ಯಾಯಾಂಗ ಕ್ರಮಗಳ” ಬಗ್ಗೆ ಎಚ್ಚರಿಕೆ ನೀಡಿರುವುದು ಸರಿಯಲ್ಲ, ಇನ್ನಷ್ಟು ವಿಳಂಬವಾದರೆ ವರ್ಗಾವಣೆ ಪಟ್ಟಿಯಲ್ಲಿರುವ ನ್ಯಾಯಾಧೀಶರಿಗೆ ನ್ಯಾಯಾಂಗ ಕೆಲಸ ನೀಡುವುದಿಲ್ಲ ಎಂದು ಪೀಠ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದಿದ್ದಾರೆ.“ಒಂದು ಹೈಕೋರ್ಟ್ನಿಂದ ಮತ್ತೊಂದು ಹೈಕೋರ್ಟ್ಗೆ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಎಂಒಪಿಯಲ್ಲಿ ಯಾವುದೇ ಕಾಲಮಿತಿ ಸೂಚಿಸಲಾಗಿಲ್ಲ” ಎಂದು ಪುನರುಚ್ಚರಿಸಿದ ಸಚಿವರು ವರ್ಗಾವಣೆ ಪಟ್ಟಿಯಲ್ಲಿರುವ ೧೦ ನ್ಯಾಯಾಧೀಶರ ಶಿಫಾರಸು ಇನ್ನೂ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.“ಎಲ್ಲಾ ವರ್ಗಾವಣೆಗಳನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಮಾಡಲಾಗುವುದು, ಅಂದರೆ, ದೇಶದಾದ್ಯಂತ ನ್ಯಾಯದ ಉತ್ತಮ ಆಡಳಿತವನ್ನು ಉತ್ತೇಜಿಸಲು. ಎಂಒಪಿ ಮತ್ತಷ್ಟು ಒದಗಿಸುತ್ತದೆ, ಭಾರತದ ಮುಖ್ಯ ನ್ಯಾಯಾಧೀಶರು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada