ನೀವು ‘KSRTC ಬಸ್’ನಲ್ಲಿ ಪ್ರಯಾಣಿಸ್ತಾ ಇದ್ದೀರಾ.? ಏನಾದ್ರೂ ಸಮಸ್ಯೆ ಆಗಿದ್ಯಾ.? ಹೀಗ್ ಮಾಡಿ, ಕೂಡಲೇ ಪರಿಹಾರ.!

 

ಬೆಂಗಳೂರು: ರಾಜ್ಯದ ಜನರ ಸಾರಿಗೆ ಸಂಚಾರಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಸೇವೆ ಸಲ್ಲಿಸುತ್ತಿದೆ. ತನ್ನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹಲವು ಕ್ರಮ ಕೆ ಎಸ್ ಆರ್ ಟಿಸಿ ಕೈಗೊಂಡಿದೆ.

ಈಗ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಯಾಣಿಕರು ನೀಡುವ ದೂರು, ತೊಂದರೆಗಳನ್ನು ಪರಿಹರಿಸೋ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆ ಇರಿಸಿದೆ. ಹಾಗಾದ್ರೇ.. ನೀವು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ (KSRTC Bus ) ಪ್ರಯಾಣಿಸ್ತಾ ಇದ್ದರೇ, ನಿಮ್ಗೆ ಏನಾದ್ರೂ ಸಮಸ್ಯೆಗಳಾದ್ರೇ.. ನೀವು ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಮಾಡೋ ಒಂದು ಪೋಸ್ಟ್, ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಲ್ಲದು. ಅದೇಗೆ ಎನ್ನುವ ಮಾಹಿತಿ ಮುಂದೆ ಓದಿ..

ಪ್ರಯಾಣಿಕ ಸ್ನೇಹಿ ಆಗುವ ನಿಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮವು ಮಹತ್ವದ ಹೆಜ್ಜೆಗಳಲ್ಲಿ, ಇದೀಗ ಸೋಷಿಯಲ್ ಮೀಡಿಯಾ ಪ್ರವೇಶವೂ ಒಂದಾಗಿದೆ. ಕೆ ಎಸ್ ಆರ್ ಟಿ ಸಿಯಿಂದ ಟ್ವಿಟ್ಟರ್, ಫೇಸ್ ಬುಕ್ ಪೇಜ್ ಕೂಡ ಆರಂಭಿಸಲಾಗಿದೆ. ಇಲ್ಲಿ ತನ್ನ ನಿಗಮದ ಸಾರ್ವಜನಿಕ ಮಾಹಿತಿ ಸೇರಿದಂತೆ, ಹಲವು ವಿಷಯಗಳನ್ನು ಜನರಿಗೆ ತಲುಪಿಸೋ ಕೆಲಸ ಮಾಡುತ್ತಿದೆ.

ಇದಷ್ಟೇ ಅಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ಬಳಸಿ ಪ್ರಯಾಣಿಸುವಂತ ಪ್ರತಿ ಪ್ರಯಾಣಿಕ ನೀಡುವ ಫೀಡ್ ಬ್ಯಾಕ್, ಸಮಸ್ಯೆಗಳ ಪೋಸ್ಟ್ ಮೇಲೆಯೂ ಹದ್ದಿನ ಕಣ್ಣನ್ನು ನೆಟ್ಟಿದೆ. ತನ್ನ ಪ್ರಯಾಣಿಕರು ತಮಗಾದ ಅನುಭವಗಳ ಜೊತೆಗೆ, ಕೆಲ ಸಮಸ್ಯೆಗಳನ್ನು ಹೇಳಿಕೊಂಡಾಗ, ಅದನ್ನು ಕೂಡಲೇ ಸಂಬಂಧಪಟ್ಟಂತವರ ಗಮನಕ್ಕೆ ತಂದು ಪರಿಹರಿಸೋ ಕಾರ್ಯಕ್ಕೂ ಮುಂದಾಗಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಯಿಂದ ಹಿಡಿದು, ಪ್ರತಿಯೊಬ್ಬ ಲಾಸ್ಟ್ ಸ್ಟಾಫ್ ಪ್ರಯಾಣಿಕನನ್ನು ಸುರಕ್ಷಿತವಾಗಿ ತಲುಪಿಸೋ ಕಾರ್ಯವನ್ನು ಮಾಡುತ್ತಿದೆ. ಒಂದೊಮ್ಮ ಸಾರಿಗೆ ಬಸ್ ನಲ್ಲಿ ಪ್ರಯಾಣಿಸಿದಂತ ಪ್ರಯಾಣಿಕನು ತನಗಾದಂತ ಸಮಸ್ಯೆ, ನಡೆದಂತ ಘಟನೆಗಳನ್ನು ಕೆ ಎಸ್ ಆರ್ ಟಿ ಸಿಯ ಟ್ವಿಟ್ಟರ್ ಖಾತೆ @KSRTC_Journeys ಟ್ಯಾಗ್ ಮಾಡಿದ್ರೇ.. ಫೇಸ್ ಬುಕ್ ಖಾತೆಯಾದಂತ @KSRTC.Karnataka ಕ್ಕೆ ಟ್ಯಾಗ್ ಮಾಡಿದ್ರೇ.. ಆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಿದೆ. ಇದಷ್ಟೇ ಅಲ್ಲದೇ ನೇರವಾಗಿ ಸಹಾಯವಾಣಿ ಸಂಖ್ಯೆ 080-26252625ಗೆ ( KSRTC Helpline Number ) ಕರೆ ಮಾಡಿ ತಿಳಿಸಿದ್ರೂ, ನಿಮ್ಮ ಸಮಸ್ಯೆಗೆ ಸೂಕ್ತ ಸ್ಪಂದನೆ, ಪರಿಹಾರ ಕೂಡ ದೊರೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವು ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆ!

Sun May 8 , 2022
ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆಯ ಮೊತ್ತಕ್ಕೆ ವ್ಯಾಪಾರವಾದ ಮೊದಲ ಕನ್ನಡ ಚಿತ್ರವಾಗಿದೆ. ವಿದೇಶಿ ಮಾರುಕಟ್ಟೆಯ ‘ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು ‘ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ನಿರ್ಮಾಪಕ ಜಾಕ್ ಮಂಜುನಾಥ್ ಮಾತನಾಡಿ, ‘ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರುತ್ತದೆ ಎಂಬುದನ್ನು ನಾನು […]

Advertisement

Wordpress Social Share Plugin powered by Ultimatelysocial