ಭಾರತೀಯ ಚಿತ್ರರಂಗದಲ್ಲಿ ನಮ್ಮ ರಿಷಬ್ ಶೆಟ್ಟಿ ಹೊಸ ಸೆನ್ಸೇಷನ್. ‘ಕಾಂತಾರ’ ಚಿತ್ರದ ಮೂಲಕ ದೇಶ ಮಾತ್ರವಲ್ಲ, ಇಡೀ ವಿಶ್ವವನ್ನೇ ಕರ್ನಾಟಕದತ್ತ, ತುಳುನಾಡಿನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ರಿಷಬ್ರದ್ದು!ಮೊನ್ನೆಯಷ್ಟೇ ಶತದಿನ ಪೂರೈಸಿದ ‘ಕಾಂತಾರ’ ಚಿತ್ರಕ್ಕೆ ಮತ್ತು ಅದರಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ಇಡೀ ತಂಡಕ್ಕೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಿದೆ. ಈಗಾಗಲೇ ಆಸ್ಕರ್ ನಾಮನಿರ್ದೇಶನದ ರೇಸ್ನಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಹೊಂಬಾಳೆ ಫಿಲ್ಮ್ಸ್ ಹೊಸ ಅಪ್ಡೇಟ್ ಕೊಟ್ಟಿದೆ.ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್.. ಕಾಂತಾರ ಚಿತ್ರವು ಎರಡು ವಿಭಾಗಗಳಲ್ಲಿ ಆಸ್ಕರ್ ನಾಮಿನೇಷನ್ಗೆ ಅರ್ಹತೆ ಪಡೆಯು ಸ್ವೀಕಾರ ಆಗಿದೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ಇಲ್ಲಿವರೆಗೆ ಬೆಂಬಲ ನೀಡಿರುವ ತಮಗೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮೆಲ್ಲರ ಬೆಂಬಲ, ಸಹಕಾರರ ಜೊತೆಗೆ ಮತ್ತೊಂದು ಪ್ರಯಾಣವನ್ನು ಎದುರು ನೋಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.
ಅಂದ್ಹಾಗೆ ಕಾಂತಾರ ಚಿತ್ರವು ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿದೆ. ಆಸ್ಕರ್ ನಾಮಿನೇಷನ್ ರೇಸ್ನಲ್ಲಿ ಒಟ್ಟು 301 ಚಿತ್ರಗಳ ಪೈಕಿ ಕಾಂತಾರವೂ ಒಂದು. ಕೊನೆ ಕ್ಷಣದಲ್ಲಿ ಆಸ್ಕರ್ಗೆ ಕಾಂತಾರ ಚಿತ್ರ ಅರ್ಜಿ ಸಲ್ಲಿಸಿತ್ತು. ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರವು ಸೆಪ್ಟೆಂಬರ್ 30 ರಂದು ತೆರೆ ಕಂಡಿತ್ತು.ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
https://play.google.com/store/apps/details?id=com.speed.newskannada