ಹಾಸನ : ರಾಜ್ಯದಲ್ಲಿ ಹಿಜಾಬ್‌ ಸಂಘರ್ಷ ಹೊತ್ತಿ ಉರಿಯುತ್ತಿದೆ. ಆದ್ರೆ, ಹಿಜಾಬ್ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳಲಾಗಿದೆ!

 

ಹಾಸನ : ರಾಜ್ಯದಲ್ಲಿ ಹಿಜಾಬ್‌ ಸಂಘರ್ಷ ಹೊತ್ತಿ ಉರಿಯುತ್ತಿದೆ. ಆದ್ರೆ, ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳಲಾಗಿದೆ.ಹಿಜಾಬ್‌ ಸಂಘರ್ಷದ ಹಿನ್ನೆಲೆಯಲ್ಲಿ ಮಕ್ಕಳಿಗೆ ತರಗತಿಗಳು ತಪ್ಪುತ್ತಿವೆ.ಈ ನಡುವೆ ಪರೀಕ್ಷೆಗಳು ಹತ್ತಿರವಾಗ್ತಿದ್ದು, ಬೇಲೂರು ಪಟ್ಟಣದ ಎಸ್.ಡಿ.ಎಂ.ಸಿ ಸದಸ್ಯರು ಪೋಷಕರೊಂದಿಗೆ ಇಂದು ಸಭೆ ನಡೆಸಿದ್ರು. ಈ ಸಭೆಯಲ್ಲಿ ಹೈಕೋರ್ಟ್‌ ಮಧ್ಯಂತರ ಆದೇಶದಂತೆ ಎಲ್ಲರ ಮನವೊಲಿಸಿ ಹಿಜಾಬ್ ತೆಗೆಯಲು ಒಪ್ಪಿಸಲಾಗಿದ್ದು, ಹಿಜಬ್ ಬದಲು ಶಾಲೆ ನಿರ್ಧಾರ ಮಾಡೋ ಬಣ್ಣದ ವೇಲ್ ಧರಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.ಇನ್ನು ಮುಸ್ಲಿಂ ಪೋಷಕರು ಶಾಲಾ ಕೊಠಡಿಯಲ್ಲಿ ವೇಲ್ ಹಾಕಿ‌ ಕೂರಲು ಅವಕಾಶ ನೀಡಿ ಎಂದು ಒತ್ತಾಯಿಸಿದ್ದು, ಪ್ರೌಢಶಾಲಾ ವಿಭಾಗದ ಮಕ್ಕಳು ಹಿಜಾಬ್ ತೆಗೆದು ಶಾಲ್ ಹಾಕಿ ಬರಲು ಪೋಷಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಎಸ್.ಡಿ.ಎಂ.ಸಿ ಅದ್ಯಕ್ಷರು ಹಾಗೂ ಪೋಷಕರು ಜಂಟಿ ಹೇಳಿಕೆ ನೀಡಿದ್ದಾರೆ. ಇದ್ರಲ್ಲಿ ಒಪ್ಪಿಗೆಯಂತೆ ವೇಲ್ ಧರಿಸಿ ನಮ್ಮ‌ ಮಕ್ಕಳು ಶಾಲೆ ಬರ್ತಾರೆ ಎಂದು ಪೋಷಕರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೈಕಲ್ ಸರ್ಕಾರ ಚುನಾಯಿತರಾದರೆ ಯುಪಿ ಭಯೋತ್ಪಾದಕ ಪೂರೈಕೆದಾರ: ಅಮಿತ್ ಶಾ

Sat Feb 19 , 2022
  ಲಕ್ನೋ, ಫೆಬ್ರವರಿ 19: ಉತ್ತರ ಪ್ರದೇಶದ ಮೂರನೇ ಹಂತದ ಮತದಾನಕ್ಕೆ ಒಂದು ದಿನ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಎಚ್ಚರಿಕೆ ನೀಡಿದ್ದು, ಸಮಾಜವಾದಿ ಪಕ್ಷ (ಎಸ್‌ಪಿ) ಯಾವುದೇ ಅಕಸ್ಮಾತ್ ಅಧಿಕಾರಕ್ಕೆ ಬಂದರೆ, ‘ಯುಪಿ ಎಲ್ಲಾ ಕಡೆ ಭಯೋತ್ಪಾದನೆಯನ್ನು ಪೂರೈಸುತ್ತದೆ. ದೇಶ.’ ಬಂದಾ ಜಿಲ್ಲೆಯ ತಿಂದವಾರಿ ಅಸೆಂಬ್ಲಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, “ಯಾವುದೇ ಒಂದು ವೇಳೆ ಸೈಕಲ್ ಸರ್ಕಾರ (ಸಮಾಜವಾದಿ ಪಕ್ಷ) ಅಧಿಕಾರಕ್ಕೆ ಬಂದರೆ, […]

Advertisement

Wordpress Social Share Plugin powered by Ultimatelysocial