ಹಾಸನ : ರಾಜ್ಯದಲ್ಲಿ ಹಿಜಾಬ್ ಸಂಘರ್ಷ ಹೊತ್ತಿ ಉರಿಯುತ್ತಿದೆ. ಆದ್ರೆ, ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳಲಾಗಿದೆ.ಹಿಜಾಬ್ ಸಂಘರ್ಷದ ಹಿನ್ನೆಲೆಯಲ್ಲಿ ಮಕ್ಕಳಿಗೆ ತರಗತಿಗಳು ತಪ್ಪುತ್ತಿವೆ.ಈ ನಡುವೆ ಪರೀಕ್ಷೆಗಳು ಹತ್ತಿರವಾಗ್ತಿದ್ದು, ಬೇಲೂರು ಪಟ್ಟಣದ ಎಸ್.ಡಿ.ಎಂ.ಸಿ ಸದಸ್ಯರು ಪೋಷಕರೊಂದಿಗೆ ಇಂದು ಸಭೆ ನಡೆಸಿದ್ರು. ಈ ಸಭೆಯಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದಂತೆ ಎಲ್ಲರ ಮನವೊಲಿಸಿ ಹಿಜಾಬ್ ತೆಗೆಯಲು ಒಪ್ಪಿಸಲಾಗಿದ್ದು, ಹಿಜಬ್ ಬದಲು ಶಾಲೆ ನಿರ್ಧಾರ ಮಾಡೋ ಬಣ್ಣದ ವೇಲ್ ಧರಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.ಇನ್ನು ಮುಸ್ಲಿಂ ಪೋಷಕರು ಶಾಲಾ ಕೊಠಡಿಯಲ್ಲಿ ವೇಲ್ ಹಾಕಿ ಕೂರಲು ಅವಕಾಶ ನೀಡಿ ಎಂದು ಒತ್ತಾಯಿಸಿದ್ದು, ಪ್ರೌಢಶಾಲಾ ವಿಭಾಗದ ಮಕ್ಕಳು ಹಿಜಾಬ್ ತೆಗೆದು ಶಾಲ್ ಹಾಕಿ ಬರಲು ಪೋಷಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಎಸ್.ಡಿ.ಎಂ.ಸಿ ಅದ್ಯಕ್ಷರು ಹಾಗೂ ಪೋಷಕರು ಜಂಟಿ ಹೇಳಿಕೆ ನೀಡಿದ್ದಾರೆ. ಇದ್ರಲ್ಲಿ ಒಪ್ಪಿಗೆಯಂತೆ ವೇಲ್ ಧರಿಸಿ ನಮ್ಮ ಮಕ್ಕಳು ಶಾಲೆ ಬರ್ತಾರೆ ಎಂದು ಪೋಷಕರು ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada